Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹಿರಿಯೂರು | ಆದಿವಾಲ ಬಳಿ ತರಕಾರಿ, ಹಣ್ಣುಗಳ ಮಂಡಿ ಉದ್ಘಾಟನೆ

---Advertisement---

ಸುದ್ದಿಒನ್, ಹಿರಿಯೂರು, ಡಿಸೆಂಬರ್. 04 : ತಾಲೂಕಿನ ಆದಿವಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ಹಿರಿಯೂರು ಜೈ ಕಿಸಾನ್ ಟೊಮ್ಯಾಟೋ ತರಕಾರಿ ಮತ್ತು ಹಣ್ಣು ಕಮಿಷನ್ ಮಂಡಿಯನ್ನು ಉದ್ಘಾಟಿಸಲಾಯಿತು.

ತರಕಾರಿ ಮಂಡಿಯನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ. ಸಿ.ಹೊರಕೇರಪ್ಪ ಮಾತನಾಡಿ ಬಯಲು ಸೀಮೆ ಜಿಲ್ಲೆಯಲ್ಲಿನ ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಂತೆ ಆದಿವಾಲ ಗ್ರಾಮದ ಬಳಿ ನೂತನವಾಗಿ ಟೊಮೋಟೊ ಮಂಡಿ ಶುರುವಾಗಿರುವುದು ಸಂತೋಷ ತಂದಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೋಟೊ ಹಣ್ಣು ಬೆಳೆ ಬೆಳೆಯುತ್ತಿದ್ದು ಈ ಟೊಮೋಟೊ ಮಾರುಕಟ್ಟೆ ರೈತರಿಗೆ ವರದಾನವಾಗಲಿದೆ. ಟೊಮೋಟೊ ಬೆಳೆ ಬೆಳೆದ ರೈತರು ದುಬಾರಿ ವೆಚ್ಚ ಖರ್ಚು ಮಾಡಿ ಕೋಲಾರ ಜಿಲ್ಲೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದು ಇದರಿಂದಾಗಿ ರೈತರಿಗೆ ದುಬಾರಿ ವೆಚ್ಚ ತಗುಲುತ್ತಿತ್ತು. ಆದರೆ ಇಂದು ತಾಲೂಕಿನಲ್ಲಿ ನೂತನ ಮಂಡಿ ಆಗಿರುವುದರಿಂದ ರೈತರಿಗೆ ಸಾಗಾಟದ ವೆಚ್ಚ ಮತ್ತು ಸಮಯ ಉಳಿತಾಯವಾಗುತ್ತದೆ. ತರಕಾರಿ, ಹಣ್ಣು ಹಂಪಲು ಇತರೆ ಬೆಳೆಗಳನ್ನು ಇದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ.ಈ ಮಂಡಿಗೆ ಕೋಲಾರ, ಚಿಕ್ಕಮಗಳೂರು,ಅನಂತಪುರ, ಬಾಣಾವರ ಇತರೆ ಕಡೆಯಿಂದ ಬಿಡ್ ದಾರರರು ಆಗಮಿಸಿದ್ದು ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಬಿಡ್ ದಾರರನ್ನು ಕರೆಸುವಂತೆ ಅವರು ಮನವಿ ಮಾಡಿದರು.

ಮೊದಲ ದಿನ ಮಾರುಕಟ್ಟೆಯಲ್ಲಿ ಸುಮಾರು 1,500 ಬಾಕ್ಸ್ ಟೊಮೋಟೊ ಬಂದಿದ್ದು 1 ನೇ ಕ್ವಾಲಿಟಿ 400 ರಿಂದ 570 ರೂ, 2 ನೇ ಕ್ವಾಲಿಟಿ 160 ರಿಂದ 250 ರೂಗಳಿಗೆ ಮಾರಾಟವಾಯಿತು.

ಈ ಸಂದರ್ಭದಲ್ಲಿ ಮಂಡಿ ಮಾಲೀಕರಾದ ಕಿಸಾನ್ ಸಯದುಲ್ಲ ಖಾನ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಮದ್ ಫಕ್ರುದ್ದೀನ್, ಸೈಯದ್ ಇರ್ಷದ್ ಮೌಲಾನ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ ಲಕ್ಷ್ಮಿಕಾಂತ್, ರಾಜಶೇಖರ್, ತಿಪ್ಪೇಸ್ವಾಮಿ, ಅನ್ಸರ್ ಅಲಿ, ರಿಜ್ವಾನ್ ಖಾನ್, ನೋಟರಿ ಷಾ ನವಾಜ್, ತ್ರಿಯಂಬಕ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now