ಸುದ್ದಿಒನ್, ಹಿರಿಯೂರು, ಆಗಸ್ಟ್. 06 : ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಒಳಹರಿವಿನಲ್ಲಿ ಸ್ವಲ್ಪ ಏರಿಕೆಯಾಗಿದ್ದು, ಇಂದು ಜಲಾಶಯಕ್ಕೆ 1900 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯ ನೀರಿನ ಮಟ್ಟ 123.70ಅಡಿ ತಲುಪಿದೆ. ಮಂಗಳವಾರ 1220 ಕ್ಯೂಸೆಕ್ ನೀರು ಹರಿದು ಬಂದಿತ್ತು. ಇಂದು 1900 ಕ್ಯೂಸೆಕ್ ಅಂದರೆ 680 ಕ್ಯೂಸೆಕ್ ನೀರು ಏರಿಕೆ ಕಂಡಿದೆ.
ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಬಾರೀ ಅವಾಂತರ ಸೃಷ್ಟಿಸಿದೆ. ಹಿರಿಯೂರು ನಗರದ ಸಿಎಂ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇನ್ನು ಮಳೆಯ ಆರ್ಭಟಕ್ಕೆ ಕೆರೆ ಕಟ್ಟೆಗಳು, ಕೃಷಿ ಹೊಂಡಗಳು ಸೇರಿದಂತೆ ಹಳ್ಳಕೊಳ್ಳ ಭರ್ತಿಯಾಗಿವೆ.



