ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮ : ಎಂ ರವೀಂದ್ರಪ್ಪ ಬೇಸರ

1 Min Read

ಸುದ್ದಿಒನ್, ಹಿರಿಯೂರು, ಆಗಸ್ಟ್. 09 : ಅಭಿಮಾನ್ ಸ್ಟುಡಿಯೋದ ನಲ್ಲಿರುವ ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದು ಹಾಗೂ ಸರ್ಕಾರ ಮೌನವಹಿಸಿರುವುದರಿಂದ ಕೋಟ್ಯಾಂತರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ತೇಲಿಸಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಎಂ ರವೀಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಕನ್ನಡ ಹಿರಿಯ ನಟನ ಸಮಾಧಿಯನ್ನು ತೆರವು ಮಾಡಿರುವುದರಿಂದ ಹಿರಿಯ ನಟನೆಗೆ ಅಗೌರವ ಮಾಡಿರುವುದು ಅಸಂಖ್ಯಾತ ಅಭಿಮಾನಿಗಳ ಮಾನಸಿಗೆ ಆರ್ಟ್ ಉಂಟಾಗಿದೆ. ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬಹುದಿತ್ತು.

ದಿವಂಗತ ಡಾ. ವಿಷ್ಣುವರ್ಧನ್ ಅವರು ಅನೇಕ ಸಾಮಾಜಿಕ ಹಾಗೂ ಕನ್ನಡಾಭಿಮಾನ, ದೇಶಭಕ್ತಿ ಹೊಂದಿರುವ ಚಿತ್ರಗಳನ್ನು ತೆರೆಯಲ್ಲಿ ತೊರಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ಸಂದೇಶ ಸಾರಿದ್ದಾರೆ. ಸರ್ಕಾರಕ್ಕೆ ಜಾಗ ಸಮಸ್ಯೆ ಬಗೆಹರಿಸುವುದು ದೊಡ್ಡ ಸವಾಲು ಆಗಿರಲಿಲ್ಲ. ಸರ್ಕಾರವೇ ಬೇರೆ ಜಾಗ ಕೊಟ್ಟು ನಟನ ಸಮಾಧಿಯನ್ನು ಉಳಿಸಬಹುದಿತ್ತು. ಏಕಾಏಕಿ ಸಮಾಧಿ ತೆರವು ಮಾಡಿರುವುದರಿಂದ ಅಭಿಮಾನಿಗಳ ಜೊತೆಗಿನ ಭಾವನಾತ್ಮಕ ಸಂಬಂಧಗಳನ್ನು ದೂರ ಮಾಡಲಾಗಿದೆ. ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಮೇರು ನಟನಿಗೆ ಅವಮಾನ ಮಾಡಿರುವ ನೋವುಂಟು ತರಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಟ ನಟಿಯರು ಸಹ ಮುಂದೆ ಬಂದು ಹಿರಿಯ ಕಲಾವಿದನ ಸಮಾಧಿಯನ್ನು ಉಳಿಸಲು ಮನಸು ಮಾಡಬಹುದಿತ್ತು. ಮರಣಹೊಂದಿರುವ ಹಿರಿಯ ನಟನಿಗೂ ಆರು, ಮೂರು ಅಡಿ ಜಾಗ ಕೊಡಲಿಲ್ಲ ಅಂದ್ರೆ ಹೇಗೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗಲೂ ಕಾಲ ಮಿಂಚಿಲ್ಲ ಸರ್ಕಾರ ಹಾಗೂ ಚಿತ್ರರಂಗ ಮಧ್ಯಪ್ರವೇಶ ಮಾಡಿ, ಸಮಸ್ಯೆ ಇರುವ ಜಾಗದ ಮಾಲೀಕರ ಜೊತೆ ಮಾತನಾಡಿ ಬಗೆಹರಿಸಿ, ಅದೇ ಜಾಗದಲ್ಲಿ ಹೊಸ ಸಮಾಧಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks