ಹಿರಿಯೂರು : ಬಾಲ್ಯ ವಿವಾಹ ತಡೆಗಟ್ಟಿದ ಸಿಡಿಪಿಒ ರಾಘವೇಂದ್ರ

0 Min Read

ಸುದ್ದಿಒನ್, ಹಿರಿಯೂರು,ಏಪ್ರಿಲ್. 30  : ತಾಲೂಕಿನ ಐಮಂಗಲ ಹೋಬಳಿಯ ಬುರುಜಿನರೊಪ್ಪ ಗ್ರಾಮದಲ್ಲಿ ದಿನಾಂಕ 30/04/2025 ರ ಬುಧವಾರ ನಡೆಯಲಿದ್ದ ಬಾಲ್ಯ ವಿವಾಹವನ್ನು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತಂಡ ತಡೆದಿದೆ.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು 17 ವರ್ಷದ ಬಾಲಕಿಯ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿದ್ದನ್ನು, ತಡೆದು ಪೋಷಕರಿಗೆ ತಿಳುವಳಿಕೆ ಹೇಳಲಾಯಿತು.18 ವರ್ಷ ತುಂಬುವ ತನಕ ಮದುವೆ ಮಾಡುವುದಿಲ್ಲ ಎಂದು ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಿಡಿಪಿಓ ರಾಘವೇಂದ್ರ, ಎಸಿಡಿಪಿಓ ಆನಂದ್, ಮೇಲ್ವಿಚಾರಕಿ ಶಾಂತಕುಮಾರಿ ಮುಂತಾದವರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *