ಹಿಜಾಬ್ ವಿವಾದದ ಬೆನ್ನಲ್ಲೇ ಸಿಂಧೂರ ವಿವಾದ : ವಿಜಯಪುರ ಕಾಲೇಜಿನಲ್ಲಿ ಏನಾಯ್ತು..?

suddionenews
1 Min Read

 

ವಿಜಯಪುರ: ರಾಜ್ಯದಲ್ಲಿ ಸದ್ಯ ಹಿಜಾಬ್ ವಿವಾದ ತಲೆದೂರಿ ನಿಂತಿದೆ. ಕೋರ್ಟ್ ಅಂಗಳದಲ್ಲಿ ವಿಚಾರಣೆಯೂ ನಡೆಯುತ್ತಿದೆ. ಈ ಮಧ್ಯೆ ಇದೀಗ ಸಿಂಧೂರ ವಿವಾದ ಸೃಷ್ಟಿಯಾಗಿದೆ.

ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಯನ್ನ ಕಾಲೇಜಿನ ಒಳಗೆ ಬಿಡಲು ನಿರಾಕರಿಸಿರುವ ಘಟನೆ ನಡೆದಿದೆ.

ಗಂಗಾಧರ್ ಬಡಿಗೇರ ಎಂಬ ವಿದ್ಯಾರ್ಥಿ ಹಣೆಗೆ ತಿಲಕ ಇಟ್ಟುಕೊಂಡು ಕಾಲೇಜಿಗೆ ಬಂದಿದ್ದ. ಇದನ್ನ ಗಮನಿಸಿದ ದೈಹಿಕ ಉಪನ್ಯಾಸ ಸಂಗಮೇಶ್ ಗೌಡ, ನಿಲ್ಲಿಸಿ, ತಿಲಕ ತೆಗೆಯುವಂತೆ ತಿಳಿಸಿದ್ದಾರೆ. ಆದ್ರೆ ಈ ವೇಳೆ ವಿದ್ಯಾರ್ಥಿ ತಿಲಕ ತೆಗೆದಿಲ್ಲ, ಮನವೊಲಿಸಿದರು ಸರಿಯಾಗದ ಕಾರಣ ವಿದ್ಯಾರ್ಥಿಯನ್ನ ಕಾಲೇಜಿನ ಒಳಗೆ ಬಿಡದೆ ಮನೆಗೆ ಕಳುಹಿಸಿದ್ದಾರೆ. ಗಂಗಾಧರ್ ನನ್ನು ಒಳಗೆ ಬಿಡದೆ ಇದ್ದಿದ್ದಕ್ಕೆ ವಿದ್ಯಾರ್ಥಿಗಳೆಲ್ಲಾ ಪ್ರತಿಭಟಿಸಿದ ಘಟನೆಯೂ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *