ಪರಿಸ್ಥಿತಿ ಕೈ ಮೀರಿದ್ರೆ ಪಾದಯಾತ್ರೆ ಕೈಬಿಡಿ : ಹೈಕಮಾಂಡ್ ಸೂಚನೆ

suddionenews
1 Min Read

 

ರಾಮನಗರ: ಒಂದು ಕಡೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದೆ. ಆದ್ರೆ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಸಾವಿರಾರು ಜನ ಸೇರಿದ್ದಾರೆ. ಇದು ಕೊರೊನಾ ಹೆಚ್ಚಳಕ್ಕೆ ದಾರಿ‌ಮಾಡಿಕೊಟ್ಟಂಗೆ ಆಗುತ್ತೆ ಅನ್ನೋದು ಆತಂಕ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಪಾದಯಾತ್ರೆ ವಿಚಾರವಾಗಿ ಹೈಕಮಾಂಡ್ ಎಂಟ್ರಿಯಾಗಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಕೆ ಪಿ ಸಿ ಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರುಗೆ ಕರೆ ಮಾಡಿ ಮಾತನಾಡಿದ್ದಾರೆ. ಪಾದಯಾತ್ರೆ ರಾಷ್ಟ್ರದ ಮಟ್ಟದಲ್ಲಿ ಚರ್ಚೆಯಾಗ್ತಾ ಇದೆ. ಕೈ ವಿರುದ್ಧ ಜನಾಕ್ರೋಶ ಬರದಂತೆ ನೋಡಿಕೊಳ್ಳಿ. ಪರಿಸ್ಥಿತಿ ಕೈ ಮೀರಿದ್ರೆ ಪಾದಯಾತ್ರೆ ಕೈ ಬಿಡಿ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರ ನಡುವೆ ಪರ ವಿರೋಧವಿದೆ. ಪಾದಯಾತ್ರೆ ಮೊಟಕುಗೊಳಿಸಲು ಹಿರಿಯರು ಒತ್ತಾಯಿಸಿದ್ದಾರೆ. ಕೇಂದ್ರ ನಾಯಕರ ಜೊತೆ ಸಮಾಲೋಚನೆ ಮಾಡೋಣ. ಪಾದಯಾತ್ರೆ ಇಲ್ಲಿಗೆ ನಿಲ್ಲಿಸೋಣ ಎಂದು ಹಿರಿಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *