ರಾತ್ರಿ ಸುರಿದ ಬಾರೀ ಮಳೆಗೆ ಧಾರವಾಡ ಜಿಲ್ಲೆ ತತ್ತರ : ಇನ್ನು ಎರಡು ದಿನ ಜೋರು ಮಳೆ

suddionenews
1 Min Read

 

 

ಧಾರವಾಡ: ರಾಜ್ಯಾದ್ಯಂತ ಮತ್ತೆ ಮಳೆ ಶುರುವಾಗಿದೆ. ರಾತ್ರಿ ಇಡೀ ಸುರಿದ ಮಳೆಗೆ ಧಾರವಾಡ ಜನತೆ ತತ್ತರಿಸಿ ಹೋಗಿದ್ದಾರೆ. ಮನೆ, ದೇವಸ್ತಾನ, ಅಂಗಡಿಗಳಿಗೆ ನೀರು ನುಗ್ಗಿದೆ. ದಾಜೀಬಾದ್ ಪೇಟೆ, ಕಮರಿಪೇಟೆಯಲ್ಲಿ ಅವಾಂತರ ಸೃಷ್ಟಿಯಾಗಿದೆ.

ಹುಬ್ಬಳ್ಳಿ ನಗರದ ದಾಜೀಬಾದ್ ಪೇಟೆ ಹಾಗೂ ಕಮರಿಪೇಟೆಯಲ್ಲಿ ನೀರು ತುಂಬಿದ್ದು, ನೀರನ್ನು ಹೊರ ಹಾಕಲು ಜನ ಹರಸಾಹಸ ಪಡುತ್ತಿದ್ದಾರೆ. ಇನ್ನು ಎರಡು ದಿನಗಳ ಮಳೆ ಬೀಳುವ ಸೂಚನೆ ನೀಡಿದೆ ಹವಮಾನ ಇಲಾಖೆ. ರಾಜ್ಯದ್ಯಂತ ಇನ್ನು ಎರಡು ದಿನ ಮಳೆಯಾಗಲಿದೆ.

ಧಾರವಾಡ ಸುತ್ತ ಮುತ್ತ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದೆ. ಇಂದು ಮನೆಯಲ್ಲಿ ಶೇಖರಣೆಯಾಗಿರುವ ನೀರನ್ನು ಹೊರ ಹಾಕುತ್ತಿದ್ದಾರೆ. ಮತ್ತೆ ಮಳೆಯಾದರೆ ಮನೆಯೆಲ್ಲಾ ಮತ್ತೆ ನೀರು ತುಂಬುವ ಆತಂಕದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *