ಪ್ರವಚನ ಮಾಡುವಾಗಲೇ ಹೃದಯಾಘಾತ : ಆಶೀರ್ವಚನ ನೀಡಿ ನಿಧನರಾದ ಸ್ವಾಮೀಜಿ..!

suddionenews
1 Min Read

 

ಬೆಳಗಾವಿ: ಒಮ್ಮೊಮ್ಮೆ ಸಾವು ಅನ್ನೋದೆ ಹಾಗೇ ಯಾರಿಗೆ, ಯಾವಾಗ, ಎಲ್ಲಿ ಬರುತ್ತೆ ಅನ್ನೋದೆ ಗೊತ್ತಾಗಲ್ಲ. ಒಳ್ಳೆ ಸಾವು ಬರಬೇಕು ಅಂದ್ರು ಅದೃಷ್ಟ ಮಾಡಿರಬೇಕು ಅಂತಾರೆ. ಯಾವುದೇ ನೋವಿಲ್ಲದೆ, ಬೇರೆಯವರಿಗೂ ತೊಂದರೆಯಿಲ್ಲದೆ ಬರುವ ಸಾವು ಅದೃಷ್ಟ ಮಾಡಿರಬೇಕು. ಪ್ರವಚನ ಮಾಡುವಾಗಲೇ ಸ್ವಾಮೀಜಿಯೊಬ್ಬರು ಹಠಾತ್ ಲಿಂಗೈಕರಾಗಿರುವ ಘಟನೆ ನಡೆದಿದೆ.

ಗೋಕಾಕ ತಾಲೂಕಿನ ಬಳೋಬಾಳಗ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ನ ಬಳೋಬಾಳ ಮಠದ ಸಂಗನಬಸವ ಮಹಾಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ನವೆಂಬರ್ 6 ರಂದು ಅವರ ಹುಟ್ಟುಹಬ್ಬವಿತ್ತು. ಅಂದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

 

ಸ್ವಾಮೀಜಿಯವರ ಹುಟ್ಟುಹಬ್ಬವನ್ನ ಭಕ್ತಾಧಿಗಳೆಲ್ಲಾ ಸೇರಿ ಆಚರಣೆ ಮಾಡುತ್ತಿದ್ದರು. ಈ ವೇಳೆ ನೆರೆದಿದ್ದ ಭಕ್ತಾಧಿಗಳಿಗೂ ಸ್ವಾಮೀಜಿ ಪ್ರವಚನ ನೀಡಿದ್ದಾರೆ. ಭಕ್ತಾಧಿಗಳು ಆಶೀರ್ವಾದ ಪಡೆದಿದ್ದಾರೆ. ಆದ್ರೆ ಈ ವೇಳೆ ಸ್ವಾಮೀಜಿಗೆ ಹಠಾತ್ ಹೃದಯಾಘಾತವಾಗಿದ್ದು, ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗೆ 53 ವರ್ಷ ವಯಸ್ಸಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *