Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮನೆಗೆ ಮಗನಂತಿದ್ದ.. ಮಕ್ಕಳಿಲ್ಲದ ಕೊರಗು ಅವನಿಗೆ ಕಾಡುತ್ತಿತ್ತು : ಮೃತ ಅಳಿಯನ ಬಗ್ಗೆ ಬಿಸಿ ಪಾಟೀಲ್ ಹೇಳಿದ್ದೇನು..?

Facebook
Twitter
Telegram
WhatsApp

ದಾವಣಗೆರೆ: ಇಂದು ಮಾಜಿ ಸಚಿವ ಬಿ.ಸಿ.ಪಾಟೀಲ್ 40 ವರ್ಷದ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಅಳಿಯನ ಬಗ್ಗೆ ಮಾತನಾಡಿರುವ ಬಿ.ಸಿ.ಪಾಟೀಲ್, ಮನೆಗೆ ಮಗನಂತಿದ್ದ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತಮಾಡಿದ ಬಿ.ಸಿ.ಪಾಟೀಲ್, ನನ್ನ ದೊಡ್ಡ ಮಗಳು ಸೌಮ್ಯಾಳೊಂದಿಗೆ ಮದುವೆಯಾಗಿತ್ತು. ಮದುವೆಯಾದ ಬಳಿಕ ನನ್ನ ಜೊತೆಗೆ ಇದ್ದು, ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ. ಇಂದು ಬೆಳಗ್ಗೆ ಊರಿಗೆ ಹೋಗಿ ಬರುತ್ತೇನೆಂದು ಹೇಳಿದ. ಹೋಗಿ ಬಾ ಎಂದು ನಾನು ಕೂಡ ಹೇಳಿದ. ಮಧ್ಯಾಹ್ನ 1.30ರ ಸುಮಾರಿಗೆ ತಾತನ ಸಹೋದರನ ಕಡೆಯಿಂದ ಫೋನ್ ಬಂತು. ಪ್ರತಾಪ್ ಎಲ್ಲಿದ್ದಾನೆ ಗೊತ್ತಾ ಎಂಬುದಾಗಿ ಕೇಳಿದರು. ಆಗಿನ್ನು ಮಾತ್ರೆ ತೆಗೆದುಕೊಂಡಿರುವ ವಿಚಾರ ತಿಳಿಯಿತು. ಫೋನ್ ಸ್ವಿಚ್ಡ್ ಆಫ್ ಆಗಿದೆ ಎಂದರು.

ನಾನು ತಕ್ಷಣ ಪೊಲೀಸರಿಗೆ ಕರೆ ಮಾಡಿದೆ. ನಂಬರ್ ಕೇಳಿದರು ನಂಬರ್ ಕೊಟ್ಟೆ. ಬಳಿಕ ಅಳಿಯನಿಗೂ ಕರೆ ಮಾಡಿದೆ. ಕಾಲ್ ರಿಸೀವ್ ಮಾಡಿದ. ಆದರೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಗಲೇ ವಾಂತಿ ಮಾಡುತ್ತಿದ್ದ. ನಾನು ಕೇಳಿದೆ ಎಲ್ಲಿದ್ದೀಯಾ ಎಂದಾಗ ರಾಣೇಬೆನ್ನೂರಿನ ರೋಡ್ ಎಂದ. ನಾನು ಮತ್ತೆ ಕೇಳಿದೆ ಹೊನ್ನಾಳಿಯ ರಾಣೇಬೆನ್ನೂರು ಎಂದ. ತಕ್ಷಣ ಎಲ್ಲರಿಗೂ ವಿಷಯ ತಿಳಿಸಿದೆ. ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ಪ್ರತಾಪ್ ಸಿಕ್ಕಿದ ಎಂಬ ವಿಚಾರ ತಿಳೀತು.‌

ಪ್ರತಾಪ್ ತಮ್ಮ ಪ್ರಭು ಕೂಡ ಹುಡುಕಾಟ ನಡೆಸುತ್ತಿದ್ದರು. ಪ್ರತಾಪ್ ಸಿಕ್ಕಿದ ಕೂಡಲೇ ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಿದರು. ಹೊನ್ನಾಳಿ ವೈದ್ಯರ ಬಳಿ ಕೇಳಿದೆ. ಏನಾಗಿದೆ ಎಂದಾಗ ಮೆಕ್ಕೆಜೋಳಕ್ಕೆ ಹಾಕುವ ಔಷಧಿ ಕುಡಿದಿದ್ದಾರೆಂದರು. ಪ್ರತಾಪ್ ತಮ್ಮ ಪ್ರಭು, ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆಂದರು. ಸರಿ ನಾನು ಬರುತ್ತೀನಿ ಎಂದೆ. ಆದರೆ 10 ಕಿ.ಮೀ ಕ್ರಮಿಸುವಷ್ಟರಲ್ಲಿ ಪ್ರಭು ಕರೆ ಮಾಡಿ, ಪ್ರತಾಪ್ ನಿಧನರಾದರು ಎಂದು ತಿಳಿಸಿದರು. ಮಗಳಿಗೆ ಮಕ್ಕಳಾಗಿರಲಿಲ್ಲ. ಅದರ ಕೊರಗು ಪ್ರತಾಪ್ ನನ್ನು ಕಾಡುತ್ತಿತ್ತು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದ ಆಶಾಕಿರಣ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ : ಕಳೆದ 13 ವರ್ಷದಲ್ಲಿ 800 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ಸುದ್ದಿಒನ್, ಚಿತ್ರದುರ್ಗ ಅ.06 : ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಇಲ್ಲಿ ಸಹಾಯ ಪಡೆದವರು ಮುಂದಿನ ದಿನದಲ್ಲಿ ಬೇರೆಯವರಿಗೆ ಸಹಾಯವನ್ನು ಮಾಡುವುದರ ಮೂಲಕ ಸಮಾಜದ ಋಣವನ್ನು ತೀರಿಸುವಂತೆ

ಮಹಿಳೆ ಸ್ವಾವಲಂಬಿಯಾಗಿ ಆರ್ಥಿಕವಾಗಿ ಬಲಶಾಲಿಯಾದರೆ ಇಡೀ ಕುಟುಂಬವೆ ಸದೃಢವಾದಂತೆ : ಕೆ.ಎಸ್.ನವೀನ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 06 : ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತಳಾಗಿದ್ದ ಮಹಿಳೆ ಈಗ ಎಲ್ಲಾ

ಬಿಗ್ ಬಾಸ್ ನಿಂದ ಮೊದಲ ವಾರವೇ ಹೊರ ಬಂದ್ರು ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದ ನಟಿ..!

ಬಿಗ್ ಬಾಸ್ ಸೀಸನ್ 11 ವಾರಕ ಕಥೆ ಕಿಚ್ಚನ ಜೊತೆಗೆ ಅದ್ಭುತವಾಗಿ ನಡೆದಿದೆ. ಇಂದು ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿ ನಡೆಯಲಿದ್ದು, ಈ ಪಂಚಾಯ್ತಿಯಲ್ಲಿಯೇ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಮೊದಲ ವಾರಕ್ಕೆ ನಟಿ

error: Content is protected !!