ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ನ ಮಾಲೀಕ ಸಿಜೆ ರಾಯ್ ಗನ್ ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದೀಗ ಅವರಿಗೆ ಡೆತ್ ನೋಟ್ ಸಿಕ್ಕಿದೆ. ಆ ಡೆತ್ ನೋಟ್ ನಲ್ಲಿ ಹಲವು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಮೊದಲಿಗೆ ಅವರ ಮನೆಯವರಿಗೆ ಕ್ಷಮೆಯನ್ನು ಕೇಳಿದ್ದಾರೆ. ನಾನು ಎಕ್ಸ್ ಟ್ರೀಮ್ ಸ್ಟೆಪ್ ತೆಗೆದುಕೊಳ್ಳುತ್ತಿದ್ದೇನೆ. ಕ್ಷಮೆ ಇರಲಿ ಎಂದು ಬರೆದಿದ್ದಾರೆ.
ಜೊತೆಗೆ ರಾಯ್ ಅವರು ಯಾರಿಗೆಲ್ಲಾ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದ್ದಾರೆ. ಯಾರು, ಎಷ್ಟು ಹಣವನ್ನು ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಂಪ್ಲೀಟ್ ಮಾಹಿತಿಯನ್ನು ಡೆತ್ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ತನ್ನ ನಿಧನದ ನಂತರದಲ್ಲಿ ಯಾರೂ ತಮ್ಮ ಸ್ಥಾನದಲ್ಲಿ ಕೂರಬೇಕು ಎಂಬ ಮಾಹಿತಿಯನ್ನು ನೀಡಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ನಲ್ಲಿ ಯಾರೆಲ್ಲಾ ದುಡಿದಿದ್ದಾರೆ, ಅವರ್ಯಾರಿಗೂ ಮೋಸ ಮಾಡಬೇಡಿ. ಅವರೆಲ್ಲಾ ನಂಬಿಕಸ್ಥರು ಎಂಬ ಮಾತನ್ನು ತಿಳಿಸಿದ್ದಾರೆ.
ರಾಯ್ ಅವರು ತಮ್ಮ ಡೆತ್ ನೋಟ್ ನಲ್ಲಿ ಬರೆದ ಅಂಶಗಳ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಾಯ್ ಅವರ ಕಂಪ್ಲೀಟ್ ವ್ಯವಹಾರ ಎಲ್ಲವೂ ಅವರ ಪತ್ನಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ರಾಯ್ ಅವರ ಅಂತ್ಯಕ್ರಿಯೆ ಬಳಿಕ ಅವರ ಪತ್ನಿ ಬಳಿ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಮಗನನ್ನು ಕಳೆದುಕೊಂಡ ಅವರ ತಾಯಿ ಅಂತು ಊಟ – ತಿಂಡಿ ಮಾಡದೆ ನಿತ್ರಾಣರಾಗಿದ್ದರು. ಹೆಂಡತಿ, ಮಕ್ಕಳಂತು ದಿಕ್ಕೆ ತೋಚದಂತೆ ಆಗಿದ್ದಾರೆ. ಇದರ ನಡುವೆ ತನಿಖೆಯೂ ನಡೆಯುತ್ತಿದ್ದು, ಅದಕ್ಕೂ ಸಹಕರಿಸಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









