ಹೆಚ್ಡಿಕೆ ಮಾಡಿದ YST ಆರೋಪ ಸರಿಯಾಗಿದೆ : ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಇತ್ತಿಚೆಗಷ್ಟೇ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದರು. ರಾಜ್ಯದಲ್ಲಿ YSat ಅಂತ ನಡೀತಾ ಇದೆ ಎಂದಿದ್ದರು. ಇದೀಗ ಆ ಬಗ್ಗೆ ಬಸನಗೌಡ ಯತ್ನಾಳ್ ಈ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆದ್ ನಲ್ಲಿ ಮೊದಲು ಇರಲಿಲ್ಲ. ಈಗ 40% ಶುರುವಾಗಿದೆ. ಸುರ್ಜೆವಾಲ, ವೇಣುಗೋಪಾಲ್, ಡಿಸಿಎಂ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರಿಗೂ ಹಣ ತಲುಪುತ್ತದೆ.

40% ಅಲ್ಲ ಪೇ ಸಿಎಂ, ಪೇ ಸೋನಿಯಾ, ಪೇ ಹೈಕಮಾಂಡ್ ಅಂತ ಎಲ್ಲಾ ಕಡೆ ತಲುಪುತ್ತದೆ. ಕಡೆಗೆ 60% ಆಗುತ್ತದೆ. ನೀವೂ ಲಂಚ ತಿನ್ನಬೇಡಿ, ನಾವೂ ತಿನ್ನೋದಿಲ್ಲ ಅಂತ ಸತ್ಯ ಹರಿಶ್ಚಂದ್ರ ಲರ ತಲೆ‌ಮೇಲೆ ಹೊಡೆದಂಗೆ ಹೇಳ್ತಾರೆ. ಆದ್ರೆ ಎಲ್ಲರೂ ಲಂಚ ತಿಂತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಹರಿಹಾಯ್ದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಿಂದೆ ಮುಂದೆ ಓಡಾಡುವ ಶಾಸಕರೊಬ್ಬರು 30 ಲಕ್ಷ ಕೊಟ್ರೆ ಕೆಲಸ ಆಗುತ್ತೆ ಅಂತ ಕೃಷ್ಣಾದಲ್ಲಿ ಹೇಳಿದ್ದಾರೆ. ಆದರೆ ದುಡ್ಡು ಕೊಟ್ಟವನು ಸಾಕ್ಷಿ ಹೇಳ್ತಾನಾ, ಅವನ ಕೆಲಸ ಆಗಬೇಕಲ್ವಾ? ಅದಕ್ಕೆ ಆತ ಹೇಳಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *