ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಮಾತೇ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೆ ಸಂವಿಧಾನದ ಗೌರವ ಉಳಿಸಬೇಕೆಂದರೆ ಕಾಂಗ್ರೆಸ್ ಪಕ್ಷವನ್ನು ಒದ್ದು ಹೊರಗಾಕಿ. ಇವತ್ತು ಈ ರಾಜ್ಯದ ಎಲ್ಲಾ ಸಮಾಜಗಳಿಗೆ ರಕ್ಷಣೆ ಕೊಡುವಂತ ಕಾರ್ಯಕ್ರಮವನ್ನು ನಾವೇನು ಮಾಡುತ್ತಾ ಇದ್ದೀವಿ, ಅವರ ಧ್ವನಿಯಾಗಿದ್ದೇವೆ. ನಾವು ಯಾವುದೇ ಒಂದು ಪಕ್ಷಕ್ಕೆ ನಮ್ಮ ಬೆಂಬಲವಿಲ್ಲ. ಯಾವುದೇ ರಾಜಿಯೂ ಇಲ್ಲ. ಸ್ವತಂತ್ರವಾಗಿ ಸರ್ಕಾರ ತರುವುದೇ ಈ ಚುನಾವಣೆಯ ನಮ್ಮ ಗುರಿ.
ಹಾಗೇ ರಿಯಲೈಸ್ ಆಗಿ ವಾಪಾಸ್ ಬರುವಂತವರು ನಮ್ಮ ಪಕ್ಷದವರು ಇದ್ದಾರೆ. ಪ್ರಾಮಾಣಿಕವಾದ ಮನಸ್ಥಿತಿಯಿಂದ ಬರುವಂತ ವ್ಯಕ್ತಿಗಳಾದರೆ ಬರಲಿ. ಆ ರೀತಿಯ ಭಾವನೆ ಯಾರಲ್ಲೆ ಇದ್ದರು ಬರಲಿ ಎಂದು ಬೇರೆ ಪಕ್ಷದಿಂದ ಬರುವವರಿಗೂ ಆಹ್ವಾನ ನೀಡಿದ್ದಾರೆ.
ಬಿಜೆಪಿ ನಾಯಕರ ಬಗ್ಗೆ ಮಾತನಾಡಿ, ಯಾವ ಕೆಲಸದ ಮುಖಾಂತರ ಅವರು ಧ್ವನಿ ಕೊಟ್ಟಿದ್ದಾರೆ. ಇವತ್ತು ಸಿಟಿ ರವಿ ಹೇಳ್ತಾರೆ. ಕಲ್ಲಂಗಡಿ ಹಣ್ಣು ಹೊಡೆದಾಗ ಕನಿಕರ ತೋರಿಸುತ್ತೀರಿ ಅಲ್ಲ, ಅದನ್ನು ತಲೆ ಹೊಡೆದಾಗಲೂ ತೋರಿಸಿ ಎಂದು ಹೇಳುತ್ತಾರೆ. ನಾನು ಬಿಜೆಪಿ ನಾಯಕರಿಗೆ ಕೇಳ್ತೀನಿ ಕಲ್ಲಂಗಡಿ ಹಣ್ಣು ಹೊಡೆದಾಗ ಅನುಕಂಪ ತೋರಿಸಿದ್ದೀವಿ. ಅದು ಮಾನವೀಯತೆ ದೃಷ್ಟಿಯಿಂದ. 15 ವರ್ಷದಿಂದ ಕಷ್ಟಪಡುತ್ತಿದ್ದ ವೃದ್ಧನನ್ನು ಬೀದಿಗೆ ತಂದಿದ್ದಕ್ಕೆ ಕನಿಕರ ತೋರಿಸಿದ್ದೇವೆ. ಸಿಟಿ ರವಿ ಅವರು ತಲೆ ಹೊಡೆದಾಗಲೂ ಕನಿಕರ ತೋರಿಸಿ ಅಂದರೆ ಅವರು ತಲೆ ಹೊಡೆದುಕೊಂಡು ಹೋಗ್ತೀವಿ, ಇದಕ್ಕೆ ಕನಿಕರ ತೋರಿಸಿ ಅನ್ನೋದಾ..? ನಮಗೆ ಬೇಕಾಗಿರೋದು ಈ ರಾಜ್ಯದಲ್ಲಿ ಯಾರ ತಲೆ ಹೊಡೆಯುವ ಕೆಲಸವೂ ಬೇಡ. ಪ್ರತಿ ಕುಟುಂಬ ನೆಮ್ಮದಿಯಿಂದ ಬದುಕಬೇಕು. ಆ ರೀತಿ ಮಾಡಿ ಅಂತಷ್ಟೇ ನಾವೂ ಕೇಳೋದು ಎಂದು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.