ನೀವೂ ಮತ್ತು ನಿಮ್ಮ ಹಿಂದೆ ಬರುವವರ ಅಭಿವೃದ್ಧಿಯಾಗಿದೆ ಅಷ್ಟೇ : ಈಶ್ವರಪ್ಪಗೆ ಕುಮಾರಸ್ವಾಮಿ ಟಾಂಗ್..!

suddionenews
1 Min Read

ಮಂಡ್ಯ: ನಗರಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಜೆಡಿಎಸ್ ನಲ್ಲಿ ಶಂಖ ಊದಲು ಜನರಿಲ್ಲ ಎಂಬ ಹೇಳಿಕೆ ಕುರಿತು ಮಾತನಾಡಿದ್ದು, ಈಗ ಶಂಖ ಊದುವ ಕಾಲವಲ್ಲ ಎಂದಿದ್ದಾರೆ.

ಶಂಖ ಊದಿಕೊಳ್ಳಲೆಂದೆ ಜನ ಇಟ್ಟುಕೊಂಡಿದ್ದೀರಿ. ನೀವೂ ಶಂಖ ಊದಿಕೊಳ್ಳಿ. ನಾವೂ ಶಂಖ ಊದಲು ಜನ ಕರೆದುಕೊಂಡು ಬರಬೇಕಿಲ್ಲ. ಮೊದಲು ಕೆಲಸ ಮಾಡಿ. ನಾವೂ ಅಧಿಕಾರದಲ್ಲಿ ಕೆಲವೇ ದಿನ ಇದ್ದರು ನಾವೂ ಮಾಡಿದ ಅಭಿವೃದ್ಧಿಯಿಂದಲೇ ಜನ ನಮ್ಮನ್ನ ನೆನಪಿಸಿಕೊಳ್ಳೋದು.

ನಾನು ಏನು ಅಭಿವೃದ್ಧಿ ಮಾಡಿದ್ದೇನೆಂಬುದಕ್ಕೆ ದಾಖಲೆ ಇಟ್ಟುಕೊಂಡಿದ್ದೇನೆ. ಆದ್ರೆ ನೀವೂ ಏನು ಅಭಿವೃದ್ಧಿ ಮಾಡಿದ್ದೀರಿ..? ನಿಮ್ಮನ್ನು ನೀವೂ ಅಭಿವೃದ್ಧಿ ಮಾಡಿಕೊಂಡಿದ್ದೀರಿ. ನಿಮ್ಮ ಹಿಂದೆ ಬರುವವರನ್ನು ಅಭಿವೃದ್ಧಿ ಮಾಡಿದ್ದೀರಿ. ಬಕಾಸುರರಂತೆ ತಿನ್‌ಓದು ಒಂದು ಅಭಿವೃದ್ಧಿಯಾ..? ಬಿಜೆಪಿಯವರು ನಮಗೆ ಯಾವ ಬೆಂಬಲವೂ ಬೇಡ ಅಂತಾರೆ. ಜೆಡಿಎಸ್ ನಿಂದ ಬೆಂಬಲವನ್ನು ಕೇಳ್ತಾರೆ ಅಂತ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *