ಹಾಸನದಲ್ಲಿ ಹೆಂಡತಿ.. ಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಪಾಪಿ : ಅದೃಷ್ಟವಶಾತ್ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ..!

suddionenews
1 Min Read

 

ಹಾಸನ : ಜಿಲ್ಲೆಯ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳನ್ನು ನೋಡುವುದಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಮನೆಗೆ ಬೆಂಕಿ ಹಚ್ಚಿದ್ದಾನೆ ಪಾಪಿ ತಂದೆ. ಮಕ್ಕಳು ಚೆನ್ನಾಗಿ ಇರಲಿ ಎಂದು ತಂದೆ ತಾಯಂದಿರು ಬಯಸುತ್ತಾರೆ. ಆದ್ರೆ ಇಲ್ಲಿ ತಂದೆ ಎನಿಸಿಕೊಂಡ ಭೂಪ ಮನೆಯೊಳಗೆ ಮಕ್ಕಳು ಇದ್ದಾರೆ ಎಂಬುದು ಗಮನಕ್ಕೆ ಇದ್ದರು ಕೂಡ, ರಂಗಸ್ವಾಮಿ ಎಂಬಾತ ಮನೆಗೆ ಬೆಂಕಿ ಹಚ್ಚಿದ್ದಾನೆ.

ಬೆಂಕಿ ಹಚ್ಚಿದ ಕೂಡಲೇ ಮನೆಯೊಳಗಿದ್ದವರ ಅರಿವಿಗೆ ಬಂದಿದೆ. ತಕ್ಷಣ ಕಿರುಚಿಕೊಂಡಿದ್ದು, ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದಿದ್ದಾರೆ. ಹೊತ್ತಿದ್ದ ಬೆಂಕಿಯನ್ನು ನಂದಿಸಿ, ಮನೆಯೊಳಗೆ ಬೆಂಕಿಯಲ್ಲಿ ಸಿಕ್ಕಿಬಿದ್ದಿದ್ದವರನ್ನು ಕಾಪಾಡಲಾಗಿದೆ. ಮನೆಯೊಳಗಿದ್ದವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೀತಾ ಮತ್ತು ರಂಗಸ್ವಾಮಿ ನಾಲ್ಕು ತಿಂಗಳಿನಿಂದ ಬೇರೆ ಬೇರೆಯಾಗಿ ವಾಸವಾಗಿದ್ದರು. ಇಬ್ಬರು ಮಕ್ಕಳಾದ ಚಿರಂತನ್ ಹಾಗೂ ನಂದನ್ ಕೂಡ ತಾಯಿಯ ಜೊತೆಗೆ ವಾಸ ಮಾಡುತ್ತಿದ್ದರು. ರಂಗಸ್ವಾಮಿ ಕೂಡ ಮಕ್ಕಳನ್ನು ಅಲ್ಲಿಯೇ ಹೋಗಿ ನೋಡಿಕೊಂಡು ಬರುತ್ತಿದ್ದರು. ನಿನ್ನೆ ಕೂಡ ಮಕ್ಕಳನ್ನು ನೋಡುವುದಕ್ಕೆ ಹೋದಾಗ ಏನು ನಡೆದಿತ್ತೋ ಏನೋ ತಾಯಿ ಗೀತಾ ಮಕ್ಕಳನ್ನು ನೋಡುವುದಕ್ಕೆ ಬಿಟ್ಟಿಲ್ಲ.

ಇದರಿಂದ ಕೋಪಗೊಂಡ ರಂಗಸ್ವಾಮಿ, ಅಲ್ಲಿಂದ ಸೀದಾ ಪೆಟ್ರೋಲ್ ಬಂಕ್ ಗೆ ಹೋಗಿ, ಪೆಟ್ರೋಲ್ ತಂದಿದ್ದಾನೆ. ಎಲ್ಲರೂ ಮಲಗಿದ್ದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಮಕ್ಕಳು ಮತ್ತು ಹೆಂಡತಿ ಗಾಯಗೊಂಡಿದ್ದಾರೆ. ಈ ಸಂಬಂಧ ಗೋರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *