ಚಿತ್ರದುರ್ಗ ನಗರಸಭೆ ಜಾಗದಲ್ಲಿ ಗುಜರಿ ಅಂಗಡಿ : ಸದಸ್ಯರ ನಡುವೆ ಮಾತಿನ ಜಟಾಪಟಿ

0 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15 : ಚಳ್ಳಕೆರೆ ಟೋಲ್‍ಗೇಟ್ 32 ನೇ ವಾರ್ಡ್‍ನಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ಗುಜರಿ ಅಂಗಡಿಯಿಟ್ಟುಕೊಂಡಿರುವುದನ್ನು ತೆರವುಗೊಳಿಸುವಂತೆ ನಗರಸಭೆ ಜಾಗವೆಂದು ನಾಮಫಲಕ ಅಳವಡಿಸಿದಾಗ ನಗರಸಭೆ ಸದಸ್ಯ ದೀಪು ನಾಮಫಲಕದ ಬಳಿ ಕುಳಿತು ಗುಜರಿ ಅಂಗಡಿಯನ್ನು ತೆರವುಗೊಳಿಸದಂತೆ ವಿರೋಧ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್ ಹಾಗೂ ಭಾಸ್ಕರ್ ಇವರುಗಳು ಗುಜರಿ ಅಂಗಡಿ ಮುಂದೆ ನಗರಸಭೆ ಸ್ವತ್ತು ಎನ್ನುವ ನಾಮಫಲಕ ಅಳವಡಿಸಿದಾಗ ನಗರದ ಬೇರೆ ಬೇರೆ ಕಡೆಯಿರುವ ನಗರಸಭೆ ಜಾಗಗಳಿಗೆ ಮೊದಲು ನಗರಸಭೆ ಸ್ವತ್ತು ಎಂದು ನಾಮಫಲಕ ಅಳವಡಿಸುವಂತೆ ಸದಸ್ಯ ದೀಪು ಪಟ್ಟುಹಿಡಿದು ಮಾತಿನ ಜಟಾಪಟಿಯಲ್ಲಿ ತೊಡಗಿದರು.

Share This Article
Leave a Comment

Leave a Reply

Your email address will not be published. Required fields are marked *