ಗುಜರಾತಿನ  ಸೇತುವೆ ದುರಂತ ಪ್ರಕರಣ :  9 ಮಂದಿ ಬಂಧನ

ಸುದ್ದಿಒನ್ ವೆಬ್ ಡೆಸ್ಕ್

ಗಾಂಧಿನಗರ:  ಗುಜರಾತ್‌ನ ಮೋರ್ಬಿ ತೂಗು ಸೇತುವೆ ಕುಸಿದು 140 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ದುರಂತಕ್ಕೆ ಸಂಬಂಧಿಸಿದಂತೆ
ಓರೆವಾ ಕಂಪನಿಯ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ
2 ವ್ಯವಸ್ಥಾಪಕರು,
2 ಗುತ್ತಿಗೆದಾರರು,
3 ಭದ್ರತಾ ಸಿಬ್ಬಂದಿ ಮತ್ತು
2   ಗುಮಾಸ್ತರು ಇದ್ದಾರೆ.

ಸೇತುವೆ ಅಪಘಾತದ ನಂತರ, ಕಂಪನಿಯ ಉನ್ನತ ಹುದ್ದೆಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇತುವೆ ವಿಚಾರದಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್‌ನಿಂದ ಹಿಡಿದು ಸೇತುವೆ ಪುನರಾರಂಭದವರೆಗೆ ಹಲವು ತಪ್ಪುಗಳು ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *