ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 16 : ನಗರದ ಶಂಕರ್ ಚಿತ್ರಮಂದಿರದ ಮಾಲೀಕ ಜಿ.ಪಿ.ಕುಮಾರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. 2024-25ನೇ ಸಾಲಿಗೆ ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್ನಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಪ್ರದರ್ಶಕರ ವಲಯದಿಂದ ಚಿತ್ರದುರ್ಗದ ಕುಮಾರ್ ಸ್ಪರ್ಧಿಸಿದ್ದರು. ಜಿ.ಪಿ.ಕುಮಾರ್ ದಶಕಗಳ ಕಾಲ ಶಂಕರ್ ಚಿತ್ರಮಂದಿರದ ಮಾಲೀಕರಾಗಿದ್ದು, ಪ್ರಸ್ತುತ ಪ್ರದರ್ಶಕರಾಗಿ ಚಲನಚಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


