Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರಿ ವೃತ್ತಿ.. 40 ಸಾವಿರ ಸಂಬಳ.. ಹಣದ ಆಸೆಗೆ ಯುವಕರಿಗೆ ಮದುವೆ ಹೆಸರಲ್ಲಿ ಪಂಗನಾಮ : ಕೋಮಲ ಅರೆಸ್ಟ್..!

Facebook
Twitter
Telegram
WhatsApp

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ಸಾಕಷ್ಟು ಯುವಕರಿಗೆ ಒದಗಿ ಬರುವುದೇ ಸಂಕಷ್ಟವಾಗಿದೆ. ಹುಡುಗಿಯರೇ ಸಿಗುತ್ತಿಲ್ಲ ಎಂಬ ಅರೋಪವಿದೆ. ಹೀಗಿರುವಾಗ ಹುಡುಗಿ ಸಿಕ್ಕರೆ ಸಾಕು ಎಂಬ ಮನಸ್ಥಿತಿಯವರೇ ಹೆಚ್ಚು. ಅಂತವರೇ ಈ ಸುಂದರಿಯ ಟಾರ್ಗೆಟ್. ಈಗಾಗಲೇ ಮದುವೆಯಾಗಿರುವ ಕೋಮಲಾ, ನಿಮ್ಮನ್ನ ಮದುವೆ ಆಗ್ತೀನಿ ನಿಮ್ಮನ್ನ ಮದುವೆ ಆಗ್ತೀನಿ ಅಂತ ಯಾಮಾರಿಸಿದ್ದಾಳೆ. ಲಕ್ಷ ಲಕ್ಷ ಹಣವನ್ನು ಪೀಕಿದ್ದಾಳೆ. ಇದೀಗ ಪೊಲೀಸರಿಗೆ ಅತಿಥಿಯಾಗಿದ್ದಾಳೆ.

ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಕೆಲಸದಲ್ಲಿದ್ದ ಕೋಮಲ ಮಹಿಳೆ ಮ್ಯಾಟ್ರಿಮೋನಿ ಅಪ್ಲಿಕೇಷನ್ ನಲ್ಲಿ ಗಂಡಸರಿಗೆ ಗಾಳ ಹಾಕಿ ಪಂಗನಾಮ ಹಾಕುತ್ತಿದ್ದಳು. ಮ್ಯಾಟ್ರಿಮೋನಿಯಲ್ಲಿ ಸಿಕ್ಕ ಗಂಡಸರೊಂದಿಗೆ ಮದುವೆಯಾಗಿ ಎರಡು ತಿಂಗಳು ಸಂಸಾರವನ್ನು ಮಾಡಿ, ಹಣ‌ತೆಗೆದುಕೊಂಡು ಎಸ್ಕೇಪ್ ಆಗುತ್ತಿದ್ದಳು. ಆರೋಪಿ ಮಹಿಳೆ ಕೋಮಲ ಗವಬರಿಬಿದನೂರಿನ ರಾಘವೇಂದ್ರ ಎಂಬುವವರಿಗೆ ಬರೀ 15 ದಿನದಲ್ಲಿ ಅವರ ಬಳಿ 7 ಲಕ್ಷ 40 ಸಾವಿರ ಹಣ ಪಡೆದುಕೊಂಡಿದ್ದಾಳೆ. ಈ ಸಂಬಂಧ ರಾಘವೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧನದ ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಹಲವು ಮೋಸಗಳು ಹೊರಗೆ ಬಂದಿವೆ. ಬೆಂಗಳೂರಿನ ನಾಗಾರಾಜ್ ಎಂಬುವವರಿಂದಾನೂ 1 ಲಕ್ಷದ 50 ಸಾವಿರ ಹಣವನ್ನು ತನ್ನ ಅಕೌಂಟ್ ಗೆ ಹಾಕಿಸಿಕೊಂಡಿದ್ದಾಳೆ. ತಾವರೆಕೆರೆ ಮೂಲದ ಮಧು ಎಂಬಾತನನ್ನು ಮದುವೆಯಾಗಿ ಎರಡು ತಿಂಗಳ ಬಳಿಕ ಎಸ್ಕೇಪ್ ಆಗಿದ್ದಾಳೆ. ಎಸ್ಕೇಪ್ ಆಗುವಾಗ 70 ಸಾವಿರ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾಳೆ. ಸದ್ಯ ಚಿಕ್ಕಬಳ್ಳಾಪುರದ ಪೊಲೀಸರ ಅತಿಥಿಯಾಗಿದ್ದು, ಎಲ್ಲಾ ಮೋಸಗಳನ್ನು ಪೊಲೀಸರು ಹೊರಗೆ ತರುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!