9 ವಿವಿ ಮುಚ್ಚಲು ಸರ್ಕಾರ ನಿರ್ಧಾರ : ಡಿಕೆಶಿ ಹೇಳಿದ್ದೇನು..?

1 Min Read

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ್ದರು. ಆ ವಿಶ್ವವಿದ್ಯಾಲಯಗಳಿಂದ ಈಗ ಆರ್ಥಿಕವಾಗಿ ದುಬಾರಿಯಾಗುತ್ತಿದೆ. ಇದು ಸರ್ಕಾರಕ್ಕೆ ಇನ್ನಷ್ಟು ಹಣಕಾಸಿನ ಸಮಸ್ಯೆಯನ್ನು ತಲೆದೂರುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಒಂದಷ್ಟು ಪರಮಾರರ್ಶೆ ನಡೆಸಿ 10ರಲ್ಲಿ 9 ವಿವಿಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಹೊಸ ಯೂನಿವರ್ಸಿಟಿ ಸ್ಥಾಪನೆ ಹಾಗೂ ಕಾರ್ಯಾಚರಣೆಗಾಗಿಯೇ 342 ಕೋಟಿ ಹಣದ ಅಗತ್ಯವಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ 100-200ಎಕರೆ ಜಮೀನು ಬೇಕು. ಬಹುತೇಕ ಯೂನಿವರ್ಸಿಟಿಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ. ಹೀಗಾಗಿ ಯೂನಿವರ್ಸಿಟಿಗಳನ್ನ ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಈ ಮೊದಲು ಒಂದು ಕಾನೂನು ಮಾಡಿದ್ದರು. ಬರೀ ಒಂದು ಯೂನಿವರ್ಸಿಟಿಗೆ ಎರಡು ಕೋಟಿ ಇಟ್ಟಿದ್ದರು. ಜಮೀನಿಲ್ಲ, ಹೋಗೋರಿಲ್ಲ. ಮಂಡ್ಯ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಯಿಂದ ಮೈಸೂರು ಯೂನಿವರ್ಸಿಟಿ ಡಿಮ್ಯಾಂಡ್ ಇಟ್ಟಿದ್ದಾರೆ. ಬೇರೆ ಯೂನಿವರ್ಸಿಟಿಯಲ್ಲಿ ಅಡ್ಮಿಷನ್ ಡ್ರಾಪ್ ಔಟ್ ಆಗಿದೆ. ಇದನ್ನ ಇಂಟರ್ ನಲ್ ಒಂದು ರಿಪೋರ್ಟ್ ಕೂಡ ಮಾಡಿದ್ದರು. ಅದನ್ನ ಮುಖ್ಯಮಂತ್ರಿಗಳು ಈಗಾಗಲೇ ನನ್ನ ಅಧ್ಯಕ್ಷತೆಯಲ್ಲಿ ಒಂದು ಕ್ಯಾಬಿನೇಟ್ ಸಭೆ ಮಾಡಿ, ಡೀಪಾಗಿ ಚರ್ಚೆ ಕೂಡ ಮಾಡಲಾಗಿದೆ.

ಇದರಲ್ಲಿ ಯಾವುದೇ ಪರ್ಸನಲ್ ಅಜೆಂಡಾ ಇಲ್ಲ. ನಮಗೆ ಮಕ್ಕಳ ಭವಿಷ್ಯವೇ ಮುಖ್ಯ. ಚಾಮರಾಜನಗರಕ್ಕೆ ಲೆಕ್ಚರರ್ ಹೇಗೋಕೆ ತಯಾರಿಲ್ಲ. ಮಂಡ್ಯಕ್ಕೆ ಹೋಗೋದಕ್ಕೆ ತಯಾರಿಲ್ಲ. ಪೆನ್ಶನ್, ಸೀನಿಯಾರಿಟಿ ಸೇರಿದಂತೆ ಹಲವು ಸಮಸ್ಯೆಗಳು ಅವರನ್ನ ಕಾಡ್ತಿದೆ. ಅದರ ಬಗ್ಗೆ ಎಲ್ಲಾ ಚರ್ಚೆ ಮಾಡಿದ್ದೀವಿ, ಅಭಿಪ್ರಾಯಗಳ ಸಂಗ್ರಹ ಆಗಿದೆ. ಸಿಎಂ ಅವರಿಗೆ ಈ ಬಗ್ಗೆ ಕಂಪ್ಲೀಟ್ ಬ್ರೀಫ್ ಮಾಡಿಲ್ಲ. ಅವರಿಗೂ ವಿಚಾರವನ್ನು ತಿಳಿಸ್ತೀನಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks