ವರ್ಗಾವಣೆ ನಿರೀಕ್ಷೆಯಲ್ಲಿದ್ದ KSRTC ನೌಕರರಿಗೆ ಗುಡ್ ನ್ಯೂಸ್

1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು KSRTC ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸಾಕಷ್ಟು ನೌಕರರು ಬಹಳಷ್ಟು ವರ್ಷಗಳಿಂದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದರು. ಅವರಿಗೆಲ್ಲಾ ಗುಡ್ ನ್ಯೂಸ್ ನೀಡಿದ್ದಾರೆ. ಅಂತರ ನಿಗಮಗಳ ವರ್ಗಾವಣೆಗೆ ಚಾಲನೆ ನೀಡಲಾಗಿದೆ. ವರ್ಗಾವಣೆ ಬಯಸುವ ನೌಕರರು ಜನವರಿ 1ರಿಂದಾನೇ ಅರ್ಜಿ ಸಲ್ಲಿಕೆ ಮಾಡಬಹುದು.

ಸರ್ಕಾರ ತೆಗೆದುಕೊಂಡಿರುವುದು ಐತಿಹಾಸಿಕ ನಿರ್ಧಾರ ಅಂತಾನೇ ಹೇಳಬಹುದು. ಸಾರಿಗೆಯಲ್ಲಿ ನಾಲ್ಕು ನಿಗಮಗಳು ಇದಾವೆ. ಆ ನಿಗಮದಲ್ಲಿ ಕೆಲಸ ಮಾಡುವವರಿಗೆ ಒಂದು ಸೀಮಿತ ಅವಕಾಶ ಮಾತ್ರವಿತ್ತು. ಅಂದ್ರೆ KSRTC ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು, KSRTC ನಿಗಮದಲ್ಲಿ ಮಾತ್ರ ಕೆಲಸ ಮಾಡುವುದಕ್ಕೆ ಅವಕಾಶವಿತ್ತು. BMTC ಗೆ ಬರುವ ಅವಕಾಶ ಇರಲಿಲ್ಲ. ಈಗ ಸರ್ಕಾರದ ನಿರ್ಧಾರದಿಂದ ಸಾರಿಗೆ ನೌಕರರು ಖುಷಿಯಾಗಿದ್ದಾರೆ. KSRTC ಡಿಪೋದಲ್ಲಿ ಕೆಲಸ ಮಾಡುವವರು ಕೂಡ BMTC ಡಿಪೋಗೆ ವರ್ಗಾವಣೆ ತೆಗೆದುಕೊಳ್ಳಬಹುದು. ಇದರಿಂದ ಹಲವು ನೌಕರರಿಗೆ ತುಂಬಾನೆ ಅನುಕೂಲವಾಗಲಿದೆ.

ಸರ್ಕಾರದ ಈ ನಿರ್ಧಾರದಿಂದ ಎಷ್ಟೋ ನೌಕರರಿಗೆ ತಮ್ಮ ಸ್ವಂತ ಜಿಲ್ಲೆಗಳಿಗೆ ಹೋಗುವುದಕ್ಕೆ ಅವಕಾಶ ಸಿಕ್ಕಂತೆ ಆಗುತ್ತದೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅವರು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ನಿಗಮಗಳ ಮುಖ್ಯಸ್ಥರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಜನವರಿ 1 ರಿಂದ ಜನವರಿ 31ರ ವರೆಗೆ ಒಂದು ತಿಂಗಳ ಕಾಲ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅರ್ಹ ನೌಕರರು ‘ಸಾಮಾನ್ಯ ವರ್ಗಾವಣೆ’ ಅಥವಾ ಇಬ್ಬರು ನೌಕರರ ಒಪ್ಪಿಗೆ ಮೇರೆಗೆ ನಡೆಯುವ ‘ಪರಸ್ಪರ ವರ್ಗಾವಣೆ’ ಅಡಿಯಲ್ಲಿ ಒಂದು ನಿಗಮದಿಂದ ಮತ್ತೊಂದು ನಿಗಮಕ್ಕೆ ವರ್ಗಾವಣೆ ಕೋರಿ ಆನ್‌ಲೈನ್ ಅಥವಾ ನಿಗದಿಪಡಿಸಿದ ಮಾದರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Share This Article
Enable Notifications OK No thanks