ಭಾವಿ ಪತಿಯ ಸಂಶಯದಿಂದ ಹೊಸ ಜೀವನ ಕಾಣಬೇಕಿದ್ದ ಯುವತಿಗೆ ಮಸಣಕ್ಕೆ ಪಯಣ..!

suddionenews
1 Min Read

ಹುಬ್ಬಳ್ಳಿ: ಮದುವೆಗೂ ಮುನ್ನ ಆತನಿಗಿದ್ದ ಸಂಶಯದ ಬುದ್ದಿಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. 25 ವರ್ಷದ ಪವಿತ್ರ ಎಂಬ ಯುವತಿ ಈ ಆತ್ಮಹತ್ಯೆ ಮಾಡಿಕೊಂಡಾತ. ಅಭಿನಂದನ್ ಎಂಬಾತನೇ ಈಕೆಯ ಸಾವಿಗೆ ಕಾರಣ ಎನ್ನಲಾಗಿದೆ.

ಪವಿತ್ರ ಹಾಗೂ ಅಭಿನಂದನ್ ಗೆ ಈಗಾಗಲೇ ನಿಶ್ಚಿತಾರ್ಥವಾಗಿತ್ತು. ಮದುವೆ ಹತ್ತಿರವಾಗುತ್ತಿದ್ದಂತೆ ಇಬ್ಬರು ಪ್ರಿ ವೆಡ್ಡಿಂಗ್ ಶೂಟ್ ಕೂಡ ಮಾಡಿಸಿದ್ದರು. ಆದ್ರೆ ಈ ನಡುವೆ ಅಭಿನಂದನ್ ಗೆ ಸಂಶಯದ ಭೂತ ಮೆಟ್ಟಿತ್ತಂತೆ. ಎಂಗೇಜ್ಮೆಂಟ್ ಆದಾಗಿನಿಂದಲೂ ಅನುಮಾನ ಪಡ್ತಾ ಇದ್ದ ಎನ್ನಲಾಗಿದೆ.

ಇನ್ನು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮುಗಿದ ಬಳಿಕವೂ ಆತನ ಅನುಮಾನ ಹೆಚ್ಚಾಗಿತ್ತಂತೆ. ವಿಪರೀತ ಕಿರುಕುಳ ನೀಡ್ತಾ ಇದ್ದನಂತೆ. ಇದರಿಂದ ಮನನೊಂದ ಪವಿತ್ರ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಕುಟುಂಬಸ್ಥರು ಅಭಿನಂದನ್ ವಿರುದ್ಧ ಆರೋಪಿಸಿದ್ದಾರೆ. ಆತನ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *