ಮೇಕೆದಾಟು ಪಾದಯಾತ್ರೆಗೆ ಮತ್ತೆ ತಯಾರಿ : ನಟ, ನಟಿಯರಿಂದಲೂ ಸಾಥ್..!

suddionenews
1 Min Read

ಬೆಂಗಳೂರು: ಕೊರೊನಾ ಕಾರಣದಿಂದಾಗಿ ಕಾಂಗ್ರೆಸ್ ನಿಂದ ಶುರುವಾಗಿದ್ದ ಪಾದಯಾತ್ರೆ ಅರ್ಧಕ್ಕೆ ನಿಂತಿತ್ತು. ಇದೀಗ ಫೆಬ್ರವರಿ 27 ರಿಂದ ಮತ್ತೆ ಆರಂಭವಾಗುತ್ತಿದೆ. ಇದಕ್ಕಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಿದ್ಧತೆಯ ಪರಿಶೀಲನೆ ನಡೆದಿದೆ.

2ನೇ ಹಂತದ ಬೃಹತ್ ಸಮಾವೇಶಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತಯಾರಿ ನಡೆದಿದೆ. ಕನಕಪುರ ಸರ್ಕಲ್ ಬಳಿಯೂ ವೇದಿಕೆ ಸಿದ್ಧವಾಗಿದೆ. ಈ ಪಾದಯಾತ್ರೆಗೆ ಕಳೆದ ಬಾರಿ ಸಾಥ್ ಕೊಟ್ಟಂತೆ ಕಾಮಿಡಿ ಕಿಂಗ್ ಸಾಧುಕೋಕಿಲ ಸಾಥ್ ನೀಡುತ್ತಿದ್ದಾರೆ. ಇಂದು ಮೈದಾನದಲ್ಲಿ ಪರಿಶೀಲನೆ ನಡೆಸುವಾಗ ಸಾಧುಕೋಕಿಲ ಅವರು ಜೊತೆಯಲ್ಲೇ ಇದ್ದರು.

ಇನ್ನು ಸ್ಯಾಂಡಲ್ ವುಡ್ ನಟಿ ಮಮತಾ ರಾಹುತ್ ಸೇರಿದಂತೆ ಹಲವು ನಟಿಯರು ಎರಡನೇ ಹಂತದ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನಟಿ ಮಮತಾ ರಾಹುತ್ ಈ ಸಂಬಂಧ ಇಂದು ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *