ಬಿಪಿನ್ ರಾವತ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದವ ಅರೆಸ್ಟ್..!

ನವದೆಹಲಿ: ಹೆಲಿಕಾಪ್ಟರ್ ದುರಂತದಿಂದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ‌ ನಿಧನರಾಗಿದ್ದಾರೆ. ಆದ್ರೆ ಕೆಲವೊಂದಿಷ್ಟು ಮೃಗೀಯ ಮನಸ್ಥಿತಿಯವರು ಅವರ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದಾರೆ. ಅಂತವರ ಮೇಲೆ ಎಲ್ಲೆಡೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ.

ಇದೀಗ ರಾಜಸ್ತಾನದಲ್ಲಿ ಒಬ್ಬ ವ್ಯಕ್ತಿಯನ್ನ ಅರೆಸ್ಟ್ ಮಾಡಲಾಗಿದೆ. ಜವ್ವಾದ್ ಖಾನ್ ಎಂಬ ವ್ಯಕ್ತಿ ಬಿಇನ್ ರಾವತ್ ಅವರ ಸಾವನ್ನ ಸಂಭ್ರಮಿಸಿ ಪೋಸ್ಟ್ ಹಾಕಿದ್ದ. ನರಕಕ್ಕೆ ಹೋಗುವ ಮೊದಲೇ ಈತನ ದೇಹ ಸುಟ್ಟು ಹೋಯ್ತು ಎಂದು ಪೋಸ್ಟ್ ಹಾಕಿದ್ದ.

ಈತ ತನ್ನ ಸೋಷಿಯಲ್ ಮೀಡಿಯಾದಲ್ಲಿ ಇಸ್ಲಾಮಿಕ್ ಫಂಡಮೆಂಟಲಿಸ್ಟ್ ಎಂದು ಹಾಕಿಕೊಂಡಿದ್ದಾನೆ. ತಾಲಿಬಾನ್ ಸಂಘದ ಪರವು ಹಲವು ಪೋಸ್ಟ್ ಗಳನ್ನ ಹಾಕಿದ್ದಾನೆ. ಈತನ ನೀಚ ಕೃತ್ಯಕ್ಕೆ ರಾಜಸ್ತಾನ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *