ಸುದ್ದಿಒನ್, ಚಿತ್ರದುರ್ಗ, ಮೇ. 02 : ಪ್ರತಿ ವರ್ಷ ಏಪ್ರಿಲ್ 16 ರಂದು ಆಚರಿಸಲ್ಪಡುವ “ವಿಶ್ವ ಧ್ವನಿ ದಿನಾಚರಣೆಯ” ಅಂಗವಾಗಿ ಡಾ|| ಪ್ರಹ್ಲಾದ ಎನ್. ಬಿ, ಎಂ. ಎಸ್ (ಚಂಡೀಗರ್) ಇವರ ನೇತೃತ್ವದಲ್ಲಿ, ಚಾಂಪಿಯನ್ಸ್ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಸ್ಥೆ ಇವರ ಸಹಯೋಗದಲ್ಲಿ ಹಾಗೂ ಚಿತ್ರದುರ್ಗ ಜಿಲ್ಲಾ ದೇವಾಲಯ ಸಂವರ್ಧನಾ ಸಮಿತಿ ಮತ್ತು ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ ಟ್ರಸ್ಟ್(ರಿ) ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 04-05-2025 ರ ಭಾನುವಾರ ದಂದು ಬೆಳಿಗ್ಗೆ 10:00 ಗಂಟೆ ಯಿಂದ ಮದ್ಯಾಹ್ನ 02:00 ಗಂಟೆಯ ವರೆಗೆ ಉಚಿತ ದ್ವನಿ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದ್ದು, ದ್ವನಿಯಲ್ಲಿ ಕರ್ಕಶತೆ, ಒಡಕುತನ, ಧ್ವನಿಯಲ್ಲಾಗುವ ಆಯಾಸ, ಧ್ವನಿಯ ಮಟ್ಟ ಅಥವಾ ಶ್ರೇಣಿಯನ್ನು ಕಡಿಮೆ ಮಾಡುವುದು ಮತ್ತು ಸಂಪೂರ್ಣವಾಗಿ ಧ್ವನಿ ನಿಂತು ಹೋಗಿರುವ ಬಡರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಶಿಬಿರದ ವಿಳಾಸ: ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ) ನಂ 29,ಬಸವ ಭವನ, ದವಳಗಿರಿ ಬಡಾವಣೆ 2ನೇ ಹಂತ ಭೀಮಸಮುದ್ರ ರಸ್ತೆ, ಚಿತ್ರದುರ್ಗ ಈ ಶಿಬಿರಕ್ಕೆ ಹೆಸರು ನೋಂದಾಯಿಸಲು ಸಂಪರ್ಕಿಸಿ: 9483519988
