ರಾಧಿಕಾ ಅವರಿಗೆ ಕುಮಾರಸ್ವಾಮಿ ಕೊಟ್ಟ ನೂರಾರು ಕೋಟಿ ಹಣದ ಬಗ್ಗೆ ಮಾಜಿ ಶಾಸಕ ಪ್ರಶ್ನೆ..!

suddionenews
1 Min Read

ರಾಮನಗರ: ಕುಮಾರಸ್ವಾಮಿ ಅವರು ಹೇಳಿದಂತೆ ಕೇಳುವವರನ್ನು ಮಾತ್ರ ಬೆಳೆಸುತ್ತಾರೆ. ಕಾಂಗ್ರೆಸ್ ಬೆಂಬಲದಿಂದ ಅವರು ಎರಡನೇ ಬಾರಿ ಸಿಎಂ ಆದವರು ಎಂದು ಮಾಜಿ ಶಾಸಕ ಕೆ ರಾಜು, ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ್ದಾರೆ.

ನಾನು ರಾಜಕೀಯಕ್ಕೆ ಬಂದಾಗ ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನರು ಅವರನ್ನ ಗುರುತಿಸಿದರು. ರಾಮನಗರಕ್ಕೆ ಅವರನ್ನ ನಾವೇ ಕರೆತಂದದ್ದು. ಆದ್ರೆ ಅವರು ಒಬ್ಬರ ಮೇಲೊಬ್ಬರನ್ನ ಎತ್ತಿಕಟ್ಟಿ ಮೇಲೆ ಬಂದರು.

ಕುಮಾರಸ್ವಾಮಿ ಹಣ ಮಾಡುವ ದಂಧೆಗೆ ಇಳಿದರು. ಮಂಡ್ಯದಿಂದ ಮಗನನ್ನ ಗೆಲ್ಲಿಸಿಕೊಳ್ಳೋದಕ್ಕೆ ಕುಮಾರಸ್ವಾಮಿ ಅವರಿಗೆ ಆಗಲಿಲ್ಲ. ಒಂದಲ್ಲ ಎರಡಲ್ಲ ನೂರಾರು ಕೋಟಿ ಹಣ ಸುರಿದರು ಮಗನನ್ನ ಗೆಲ್ಲಿಸಿಕೊಳ್ಳಲು ಆಗಲೇ ಇಲ್ಲ. ಕುಮಾರಸ್ವಾಮಿ ಅವರ ಅಕ್ರಮ ನೋಡಿ ಜನರು ಅವರನ್ನ ಸೋಲಿಸಿದ್ರು. ದೇವೇಗೌಡರ ಸೋಲಿಗೂ ಕುಮಾರಸ್ವಾಮಿ ಅವರೇ ಕಾರಣ.

ಸುಳ್ಳಿನ ಮಾಲೆ ಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ರಾಧಿಕಾ ಅವರನ್ನ ಮತ್ತೊಂದು ಮದುವೆಯಾದರು. ಆ ಬಳಿಕ ಕುಮಾರಸ್ವಾಮಿಯಿಂದ ರಾಧಿಕಾ ದೂರಾಗಲೂ ನೂರಾರು ಕೋಟಿ ಹಣ ಸುರಿದರು. ಅದು ಯಾವ ಪುಣ್ಯದಿಂದ ಬಂದ ಹಣ ಹಾಗಾದ್ರೆ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *