ಸಿಸಿಎಲ್ ಪಂದ್ಯ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಮಾಜಿ ಸಚುವ ರಾಜುಗೌಡ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ರಾಜು ಗೌಡ ಸೇರಿದಂತೆ ಕಾರಲ್ಲಿ ಇದ್ದವರಿಗೆ ಯಾವುದೇ ಅಪಾಯ ಆಗಿಲ್ಲ. ಈ ಘಟನೆ ನಡೆದಿರೋದು ಯಾದಗಿರಿ ನಗರದ ಗಂಜ್ ಪ್ರದೇಶದ ಬಳಿ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ.
ಆಂಧ್ರದ ವಿಶಾಖಪಟ್ಟಣದಲ್ಲಿ ಸಿಸಿಎಲ್ ಪಂದ್ಯಾವಳಿ ನಡೆಯುತ್ತಿತ್ತು. ಪಂದ್ಯ ಮುಗಿಸಿ ಮನೆ ಕಡೆಗೆ ವಾಪಾಸ್ ಆಗುತ್ತಿದ್ದರು. ಆದರೆ ಯಾದಗಿರಿಯ ಗಂಜ್ ಪ್ರದೇಶ ಸಮೀಪಿಸುತ್ತಿದ್ದಂತೆ, ರಾಜು ಗೌಡ ಇದ್ದ ಕಾರಿಗೆ ಟ್ರಕ್ ಒಂದು ಬಂದು ಗುದ್ದಿದೆ. ಹಿಂಬದಿಯಿಂದ ಗುದ್ದಿದ ಪರಿಣಾಮ ಚಾಲಕನ ಹಿಡಿತ ತಪ್ಪಿದೆ, ಕಾರು ಅಪಘಾಗಕ್ಕೀಡಾಗಿದೆ. ಇದರ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಯಾದಗಿರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ರಿಜಿಸ್ಟರ್ ಆಗಿದೆ.
ಕಾರಿನಲ್ಲಿ ಕುಳಿತಿದ್ದ ರಾಜುಗೌಡ ಅವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿವೆ. ಈ ಸುದ್ದಿ ತಿಳಿದ ಕೂಡಲೇ ಅವರ ಬೆಂಬಲಿಗರು ಆತಂಕಗೊಂಡಿರುತ್ತಾರೆ. ಇದೇ ಕಾರಣದಿಂದ ರಾಜು ಗೌಡ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರ ಆಶೀರ್ವಾದದಿಂದ ನನಗೆ ಏನೂ ತೊಂದರೆ ಆಗಿಲ್ಲ. ಕೊಡೆಕಲ್ ಬಸವಣ್ಣಪ್ಪನ ಆಶೀರ್ವಾದ, ಕಾರ್ಯಕರ್ತರ ಆಶೀರ್ವಾದ ಇರುವವರೆಗೂ ಏನೂ ಆಗಲ್ಲ. ಎಳ್ಳಷ್ಟು ನನಗೆ ಗಾಯವಾಗಿಲ್ಲ. ಕಾರು ಫೋಟೋ ನೋಡಿ ಸಾಕಷ್ಟು ಜನರು ಆತಂಕಕ್ಕೊಳಗಾಗಿದ್ದರು. ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಆಶೀರ್ವಾದದಿಂದ ನನಗೆ ಏನು ಆಗಿಲ್ಲ ಎಂದಿದ್ದಾರೆ.
ರಾಜುಗೌಡ ಅವರು ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. 2023ರಲ್ಲಿ ಅಸೆಂಬ್ಲಿ ಚುನಾವಣೆ ಹಾಗೂ 2024ರಲ್ಲಿ ನಡೆದ ಸುರಪುರ ಅಸೆಂಬ್ಲಿ ಉಪಚುನಾವಣೆಯಲ್ಲಿ ರಾಜು ಗೌಡ ಸೋಲು ಕಂಡಿದ್ದರು.


