ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಅಪಘಾತ : ದೇವರ ದಯೆಯಿಂದ ಎಲ್ಲರು ಆರಾಮಾಗಿದ್ದಾರೆ ಎಂದ ಪುತ್ರ

1 Min Read

ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಜಿಲ್ಲೆಯ ರಾಯಭಾಗ ಪಟ್ಟಣದ ಹಾರೋಗೇರಿ ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿತ್ತು. ಈ ವೇಳೆ ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿತ್ತು. ಲಕ್ಷ್ಮಣ ಸವದಿಗೂ ದೇಹದ ಮೇಲೆ ಗಾಯವಾಗಿತ್ತು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಘಟನೆ ಸಂಬಂಧ ಸವದಿ ಅವರ ಮಗ ಚಿದಾನಂದ ಸವದಿ ಮಾತನಾಡಿದ್ದು, ದೇವರ ದಯೆಯಿಂದ ಏನು ಆಗಿಲ್ಲ. ಎಲ್ಲರು ಆರಾಮವಾಗಿದ್ದಾರೆ ಎಂದಿದ್ದಾರೆ. ಥಣಿಯಿಂದ ಬೆಳಗಾವಿಗೆ ಹೊರಡುವಾಗ ಈ ದುರ್ಘಟನೆ ನಡೆದಿದೆ. ತಂದೆಯವರಿಗೆ, ಕಾರು ಚಾಲಕ, ಗನ್ ಮ್ಯಾನ್ ಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಸಿದ್ದಾರೆ.

ಎಲ್ಲರ ಆಶೀರ್ವಾದದಿಂದ ಸವದಿ ಅವರು ಹುಷಾರಾಗಿದ್ದಾರೆ. ದೇವರ ದಯೆಯಿಂದ ತಂದೆಯವರಿಗೆ ಏನು ಆಗಿಲ್ಲ. ದೇವರ ದಯೆಯಿಂದ ಎಲ್ಲರು ಆರಾಮವಾಗಿದ್ದಾರೆ ಎಂದು ಬೆಂಬಲಿಗರು, ಕಾರ್ಯಕರ್ತರಿಗೆ ಗಾಬರಿಯಾಗದಂತೆ ವಿಷಯ ತಿಳಿಸಿದ್ದಾರೆ. ಸದ್ಯ ಸವದಿಯವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ತೆರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *