ಬದುಕಿದ್ದಾಗ ನೋಡಿಕೊಳ್ಳದವರು, ಆಸ್ತಿಗಾಗಿ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡರು…!

1 Min Read

ಮೈಸೂರು : ಈ ಘಟನೆ ವಿಚಿತ್ರವೆನಿಸಿದ್ರು ಸತ್ಯದ ಸಂಗತಿ. ಹಣ – ಆಸ್ತಿ ಅಂದ್ರೆ ಎಂಥವರಿಗೂ ದುರಾಸೆ ಬಂದೇ ಬರುತ್ತೆ. ಆದ್ರೆ ಜಿಲ್ಲೆಯಲ್ಲೊಂದು ಆಸ್ತಿಗಾಗಿ ವಿಚಿತ್ರ ಘಟನೆಯೇ ನಡೆದಿದೆ. ಬದುಕಿದ್ದಾಗ ಯಾರೂ ನೋಡಿಕೊಳ್ಳಲಿಲ್ಲ. ಸತ್ತಾಗ ಆಸ್ತಿ ಪಾಲು ಪಡೆಯಲು ಕಿತ್ತಾಟ ನಡೆಸಿದ ಘಟನೆಯಿದು.

ಹನ್ನೊಂದು ದಿನಗಳ ಹಿಂದೆ ಜಯಮ್ಮ (63) ಎಂಬುವವರು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅವರ ಅಣ್ಣನ‌ ಮಕ್ಕಳು ಆಸ್ತಿಗಾಗಿ ಶವದ ಹೆಬ್ಬೆಟ್ಟು ಒತ್ತಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮೈಸೂರಿನ ಶ್ರೀರಾಂಪುರದಲ್ಲಿ ಘಟನೆ ಇದು.

ಮೃತ ಜಯಮ್ಮನ ಕುಟುಂಬಕ್ಕೆ ಪಿರ್ತಾರ್ಜಿತವಾಗಿ 14 ಎಕರೆ ಆಸ್ತಿ ಇತ್ತು. ಮದುವೆಯಾದ ಹೊಸದರಲ್ಲೇ ಪತಿಯಿಂದ ದೂರವಾಗಿದ್ದ ಜಯಮ್ಮ. ಆಸ್ತಿ ಪಾಲು ಪಡೆಯಲು ಪತಿಯೂ ಬದುಕಿಲ್ಲ, ಮಕ್ಕಳೂ ಇಲ್ಲ. ಹೀಗಾಗಿ ಜಯಮ್ಮನಿಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಇದ್ದಾನೆ. ಮೃತ ಜಯಮ್ಮನ ಆಸ್ತಿ ಪಡೆಯಲು ಇವರುಗಳ ನಡುವೆಯೇ ಕಿತ್ತಾಟ ಶುರುವಾಗಿದೆ.

ಅಕ್ಕನ ಮಗನಿಂದ ಆಸ್ತಿಗಾಗಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಳ್ಳಲಾಗಿದೆ. ಅದು ಬದುಕಿದ್ದಾಗ ಅಲ್ಲ. ಶವವಾಗಿ ಮಲಗಿದ ಮೇಲೆ. ಇದನ್ನ ಹಲವರು ವಿರೋಧಿಸಿದರು ಕುಟುಂಬಸ್ಥರು ಕೇಳಿಲ್ಲ.‌ಮಾತಿನ ಚಕಮಕಿ ನಡೆದ ವಿಡಿಯೋ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *