ವೇಣುಗೋಪಾಲ ದೇವಾಲಯದಲ್ಲಿ ಬೆಂಕಿ ಅವಘಡ : ದೇವಾಲಯದೊಳಗೆ ಸಿಲುಕಿದ ಭಕ್ತರು..!

suddionenews
1 Min Read

 

 

ಆಂಧ್ರಪ್ರದೇಶ: ಇಂದು ಶ್ರೀರಾಮನವಮಿ. ಎಲ್ಲೆಡೆ ಭಕ್ತಿ ಭಾವದಿಂದ ಆಚರಣೆ ಮಾಡಲಾಗುತ್ತಿದೆ. ಆದ್ರೆ ಇಂಥ ಸಂದರ್ಭದಲ್ಲಿ ಗೋಪಾಲ ದೇವಸ್ತಾನದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶ್ರೀರಾಮನವಮಿ ಆಚರಣೆ ವೇಳೆಯಲ್ಲಿಯೇ ದೇವಸ್ಥಾನಕ್ಕೆ ಬೆಂಕಿ ಹೊತ್ತಿಕೊಂಡಿದೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ತನಕು ಮಂಡಲದ ದುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಸುತ್ತಮುತ್ತ ಇದ್ದಂತ ಟೆಂಟ್ ಗೆ ಬೆಂಕಿ ಹೊತ್ತಿಕೊಂಡಿದೆ‌. ನೋಡ ನೋಡುತ್ತಿದ್ದಂತೆ ಬೆಂಕಿ ಜಾಸ್ತಿಯಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಬೆಂಕಿ ಜೋರಾಗಿಯೇ ಕಾಣಿಸಿಕೊಂಡಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದೇವಾಲಯದ ಒಳಗೆ ಇನ್ನಷ್ಟು ಭಕ್ತರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬೆಂಕಿ ನಂದಿಸುವ ಕೆಲಸದ ಜೊತೆಗೆ ಭಕ್ತರನ್ನು ಕಾಪಾಡುವ ಕೆಲಸವೂ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks