ಮಸೀದಿ ಪಕ್ಕದಲ್ಲೇ ಬೆಂಕಿ ಅವಘಡ : ಪೊಲೀಸರ ಮುಂಜಾಗ್ರತೆಯಿಂದ ತಪ್ಪಿದ ಅನಾಹುತ..!

suddionenews
1 Min Read

 

ಬೆಂಗಳೂರು: ಇವತ್ತು ಶುಕ್ರವಾರ.. ಮುಸ್ಲಿಂ ಬಾಂಧವರು ಮಸೀದಿಗೆ ಬಂದು ಪ್ರಾರ್ಥನೆ ಮಾಡುವ ಪದ್ಧತಿ. ಆದ್ರೆ ಇಂದು ಒಂದು ಕ್ಷಣ ಯಾಮಾರಿದ್ರು ಭಾರಿ ಅನಾಹುತವೇ ಆಗುತ್ತಿತ್ತೇನೋ. ಪೊಲೀಸರ ಮುಂಜಾಗ್ರತೆಯಿಂದ ಈ ಅನಾಹುತ ತಪ್ಪಿದೆ.

ಹೆಬ್ಬಾಳ ಬಳಿಯ ನಾಗಾವಾರಾದಲ್ಲಿ ಮಸೀದಿಯೊಂದಿದೆ. ಅದಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲೇ ಸಿಲಿಂಡರ್ ಶಾಪ್ ಕೂಡ ಇದೆ. ಆ ಶಾಪ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಮಧ್ಯಾಹ್ನದ ಸಮಯದಲ್ಲಿ ಈ ಘಟನೆ ನಡೆದಿದೆ.

ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಜೊತೆಗೆ ಮಸೀದಿಗೆ ಪ್ರಾರ್ಥನೆಗಾಗಿ ಬರುತ್ತಿದ್ದ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ‌ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *