ಆರ್ಥಿಕ ಸಂಕಷ್ಟವೇ ಗುರುಪ್ರಸಾದ್ ಜೀವ ಕಳೆದುಕೊಳ್ಳುವಂತೆ ಮಾಡೀತಾ..?

1 Min Read

ನಿರ್ದೇಶಕ, ಬರಹಗಾರ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆದರೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಹತ್ತು ದಿನಗಳೇ ಕಳೆದಿವೆ. ದೇಹ ಕೊಳೆತ ಸ್ಥಿತಿಗೆ ತಲುಪಿತ್ತು. ಅಷ್ಟಕ್ಕೂ ಗುರುಪ್ರಸಾದ್ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಆರ್ಥಿಕ ಸಂಕಷ್ಟವೇ ಕಾರಣ ಎನ್ನಲಾಗಿದೆ. ವಿಪರೀತ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಸಾಲು ಸಾಲು ಸಿನಿಮಾಗಳ ಸೋಲು ಅವರನ್ನು ಕಂಗೆಡಿಸಿತ್ತು. ಹಲವು ಚಟಗಳಿಗೆ ಗುರುಪ್ರಸಾದ್ ಅಂಟಿಕೊಂಡು ಬಿಟ್ಟಿದ್ದರು ಎಂದು ಅವರ ಆಪ್ತ ಮೂಲವೇ ಹೇಳುತ್ತಿದೆ. ಜೊತೆಗೆ ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟವೂ ಅವರನ್ನು ಕಾಡುತ್ತಿತ್ತಂತೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಗುರುಪ್ರಸಾದ್, ಪದೇ ಪದೇ ಮನೆ ಬದಲಿಸುತ್ತಿದ್ದರಂತೆ. ಹೀಗಾಗಿ ಗುರುಪ್ರಸಾದ್ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕೇಸ್ ಕೂಡ ದಾಖಲಾಗಿತ್ತು. ಆದರೆ ಈಗ ಅವರೇ ಇಲ್ಲವಾಗಿದ್ದಾರೆ.

ಯಾವ ರೀತಿಯಲ್ಲಿ ಮನೆ ಚೇಂಜ್ ಮಾಡ್ತಾ ಇದ್ರು ಅಂದ್ರೆ, ಬಸವೇಶ್ವರ ನಗರದ ಬಳಿ ಬಾಡಿಗೆ ಮನೆಯಲ್ಲಿದ್ದ ಗುರುಪ್ರಸಾದ್ ಬಳಿಕ ಜಯನಗರದಲ್ಲಿ ಬಾಡಿಗೆ ಮನೆ ಪಡೆದಿದ್ದರು. ಅಷ್ಟೇ ಅಲ್ಲ ಕೆಲ ದಿನಗಳ ಕಾಲ ಹೊಟೇಲ್ ರೂಮಿನಲ್ಲೂ ವಾಸವಿದ್ದರು. ಸಾಲಗಾರರ ಕಾಟ ತಾಳಲಾರದೆ ಬಾಡಿಗೆ ಮನೆಯನ್ನು ಬದಲಾಯಿಸುತ್ತಲೇ ಇದ್ದರು. ಇತ್ತೀಚೆಗಷ್ಟೇ ಮಾದನಾಯಕನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆಗಿದ್ದರು. ಆದರೆ ಈ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆದ ವಿಚಾ್ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ. ಇದೇ ಅಪಾರ್ಟ್ಮೆಂಟ್ ನಲ್ಲಿ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಇತಿಮಿತಿಗೂ ಮೀರಿ ಸಾಲ ಮಾಡಿಕೊಂಡಿದ್ದ ಗುರು ಪ್ರಸಾದ್ ಈಗ ಎಲ್ಲರನ್ನು ಬಿಟ್ಟು ಬಾರದಲೋಕಕ್ಕೆ ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *