Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಣದ ವಿಚಾರಕ್ಕೆ ಜಗಳ : ಕೊಲೆಯಲ್ಲಿ ಅಂತ್ಯವಾಯ್ತು ಜಯಣ್ಣ ಬದುಕು..!

Facebook
Twitter
Telegram
WhatsApp

ಹಿರಿಯೂರು: ಕೊಟ್ಟ ಸಾಲ ಕೇಳಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಕೋಪ ತಾರಕಕ್ಕೇರಿ, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಜಗಳದಲ್ಲಿ 65 ವರ್ಷದ ಜಯಣ್ಣ ಮೃತ ಪಟ್ಟಿದ್ದಾರೆ. ಹಿರಿಯೂರು ತಾಲೂಕಿನ ದಿಂಡವಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

2021 ಎಪ್ರಿಲ್ ನಲ್ಲಿ ಒಂದು ಆಕ್ಸಿಡೆಂಟ್ ಆಗಿತ್ತು. ಗಂಗಾಧರ್ ಹಾಗೂ ಅಣ್ಣಪ್ಪನ ನಡುವೆ ಅಪಘಾತ ಸಂಭವಿಸಿ, ಅಣ್ಣಪ್ಪ ಸಾವನ್ನಪ್ಪಿದ್ದ. ಆ ಬಳಿಕ ಗಂಗಾಧರ್ ಊರು ಬಿಟ್ಟು ಓಡಿ ಹೋಗಿದ್ದ. ಜೊತೆಗೆ ಆಕ್ಸಿಡೆಂಟ್ ನಲ್ಲಿ ತೀರಿ ಹೋಗಿದ್ದ ಅಣ್ಣಪ್ಪನ ಬಳಿ ಸಾಲವನ್ನು ಪಡೆದಿದ್ದ. ಅಣ್ಣಪ್ಪ, ಜಯಣ್ಣನ ಮಗನಾಗಿದ್ದ. ಸಾಲ ಕೊಟ್ಟಿದ್ದ ವಿಚಾರ ಜಯಣ್ಣನಿಗೂ ತಿಳಿದಿತ್ತು.

ಊರು ಬಿಟ್ಟಿದ್ದ ಗಂಗಾಧರ್ ಭೂತಪ್ಪನ ಹಬ್ಬಕ್ಕೆ ಹಾಜರಾಗಿದ್ದ. ಸೋಮವಾರದಂದು ಊರಿನಲ್ಲಿ ಕಾಣಿಸಿಕೊಂಡಿದ್ದ. ಗಂಗಾಧರ್ ನನ್ನು ಕಂಡ ಜಯಣ್ಣ, ಮಗನಿಂದ ಪಡೆದ ಸಾಲ ವಾಪಾಸ್ ಕೊಡಬೇಕೆಂದು ಕೇಳಿದ್ದ. ಆದರೆ ಆ ಸಮಯದಲ್ಲಿ ಗಂಗಾಧರ್, ನಾನು ಯಾವ ಹಣವನ್ನು ಕೊಡುವಂತೆಯೇ ಇಲ್ಲ. ಎಲ್ಲಾ ತೀರಿದೆ‌ ಎಂದಿದ್ದ. ಆ ಕ್ಷಣದಲ್ಲಿ ಮಾತಿಗೆ ಮಾತು ಬೆಳೆದಿತ್ತು, ಕೋಪ ತಾರಕಕ್ಕೆ ಏರಿತ್ತು. ಅದರ ಪರಿಣಾಮ ಜಯಣ್ಣನನ್ನು ಕೊಲೆ‌ ಮಾಡಲಾಗಿದೆ.

ಈ ಜಗಳದಲ್ಲಿ ಗಂಗಾಧರ್, ಜಯಣ್ಣನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು, ನೆಲಕ್ಕೆ ಬೀಳಿಸಿದ್ದ. ಇದರಿಂದ ಜಯಣ್ಣ ಅಂಗಾತವಾಗಿ ಬಿದ್ದು ಗಾಯಗೊಂಡಿದ್ದ. ತಕ್ಷಣ ಆತನನ್ನು ಸ್ಥಳೀಯ ದಿಂಡವಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮಾರ್ಗಮಧ್ಯೆ ಜಯಣ್ಣನ ಉಸಿರು ನಿಂತಿದೆ ಎಂದು ಹೇಳಿದರು. ದುರುದ್ದೇಶದಿಂದ ಜಯಣ್ಣನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಆರೋಪಿ ಗಂಗಾಧರ್ ವಿರುದ್ಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!