ಬೆಂಗಳೂರು: ಜೂನ್ – ಜುಲೈ ತಿಂಗಳಲ್ಲಿ ಒಂದಷ್ಟು ಬೆಳೆಗಳನ್ನ ಹಾಕುವುದಕ್ಕೆ ಸರಿಯಾದ ಸಮಯ. ಅದರಲ್ಲೂ ಈ ಸಮಯದಲ್ಲಿ ಭೂಮಿ ಬಿತ್ತನೆ ಮಾಡಿ, ಬೀಜಗಳನ್ನ ಅದಾಗಲೆರ ಬಿತ್ತನೆ ಮಾಡಿರುತ್ತಾರೆ. ರಾಗಿ, ದ್ವಿದಳ ದಾನ್ಯಗಳನ್ನ ಬೆಳೆಯುವವರು ಈ ಸಮಯಕ್ಕಾಗಿ ಕಾಯ್ತಾ ಇರ್ತಾರೆ. ಒಳ್ಳೆ ಮಳೆ ಕೂಡ ಆಗ್ತಾ ಇದೆ. ಆದರೆ ಇದೇ ಸಮಯಕ್ಕೇನೆ ಗೊಬ್ಬರದ ಕೊರತೆಯಾದರೆ ಹೇಗೆ..? ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದ್ದು, ಚಿಂತೆಯಲ್ಲಿ ಮುಳುಗಿದ್ದಾರೆ. ಸದ್ಯ ರೈತರಿಗೆ ಯಾವ ಥರದ ಗೊಬ್ಬರಗಳು ಸಿಗಲಿವೆ ಎಂಬುದನ್ನ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ರೈತರು ಆತಂಕ ಪಡುವ ಅಗತ್ಯವಿಲಗಲ. ರಾಜ್ಯದಳ್ಇ ಯಾವುದೇ ಜಿಲ್ಲೆಯಲ್ಲಿಯೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಇಲ್ಲ. ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚುವರಿ ಉಳಿಕೆ ಇರುವ ಇತರೆಡೆಗಳಿಂದ ವರ್ಗಾವಣೆ ಮಾಡಿ ಸರಿದೂಗಿಸಲಾಗುವುದು ಎಂದು ತಿಳಿಸಿದ್ದಾರೆ.
ರೈತರಿಗೆ ಯಾವುದೇ ರೀತಿಯ ತೊಂದರೆಗಳು ಸಂಭವಿಸದಂತೆ ಗಮನ ನೀಡುವುದಕ್ಕೆ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವರ್ಷ ಕಳೆದ ಬಾರಿಗಿಂತ ಬಹಳ ಬೆರಗ ಮುಂಗಾರು ಆರಂಭವಾಗಿದೆ. ಜೊತೆಹೆ ಮುಸುಕಿನ ಜೋಳದ ಪ್ರದೇಶ 2 ಲಕ್ಷ ಎಕ್ಟೇರ್ ವಿಸ್ತರಣೆಯಾಗಿದೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಅಷ್ಟೆ ಅಲ್ಲ ಆತಂಕಗೊಂಡ ರೈತರು ಆಗಸ್ಟ್ – ಸೆಪ್ಟೆಂಬರ್ ಗೆ ಬೇಕಾದ ಗೊಬ್ಬರವನ್ನ ಈಗಲೇ ಖರೀದಿ ಮಾಡಲು ಮುಂದಾಗಿದ್ದಾರೆ. ಹೀಗಾಗಿಯೂ ಬೇಡಿಕೆ ಹೆಚ್ಚಾಗಿರಬಹುದು. ಆದರೆ ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಗೊಬ್ಬರ ಎಲ್ಲಾ ಸಮಯಕ್ಕೂ ಸಿಗಲಿದೆ ಎಂಬ ಭರವಸೆಯನ್ನ ನೀಡಿದ್ದಾರೆ.


