Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪನೆಂಬ ಆಲದ ಮರ : ಸುಜಾತ ಪ್ರಾಣೇಶ್ ಅವರ ಕವನ

Facebook
Twitter
Telegram
WhatsApp

 

 

ಅಪ್ಪ ನೀನು ಆಲದ ಮರದಂತೆ
ನಿನ್ನ ಮನಸು ವಿಶಾಲವಾದ ಗಗನದಂತೆ
ತೋರುವೆ ಮಕ್ಕಳಲ್ಲಿ ನಿನ್ನ ಪ್ರೀತಿ ಮಮತೆ

ನಿನ್ನ ಸುಖವ ಮರೆಯುವೆ ಮಕ್ಕಳಿಗಾಗಿ
ನೀನಾಗಿಬಿಡುವೆ ನಿಜವಾದ ತ್ಯಾಗಿ
ದುಡಿದು ದಣಿಯುವೆ ಮನೆಗಾಗಿ

ಕೇಳಿದ್ದನ್ನು ಕೊಡಿಸುವ ಕಲ್ಪವೃಕ್ಷ ನೀನು
ತಿದ್ದಿ ಬುದ್ಧಿ ಹೇಳುವ ಗುರುವು ನೀನು
ವಾತ್ಸಲ್ಯ ಧಾರೆ ಹರಿಸಿಬಿಡುವೆ ನೀನು

ದಾರಿದೀಪವಾಗಿ ಮುನ್ನಡೆಸುವೆ ನೀನು
ಕಂದ ನೀನೆ ಕಣ್ಣಬೆಳಕು ಎನ್ನುವೆ ನೀನು
ಕೂಸುಮರಿ ಮಾಡುತ ಆಡಿಸುವೆ ನೀನು

ನನ್ನ ನೋಡಿ ಕಷ್ಟಗಳ ಮರೆಯುವೆ ನೀನು
ನಾನೆ ನಿನ್ನ ಜಗವೆಂದು ಹೇಳುವೆ ನೀನು
ನನಗೆ ನೋವಾದರೆ ಸಹಿಸಲಾರೆ ನೀನು

ಉತ್ತಮ ಸಂಸ್ಕಾರ ನೀಡಿ ಬೆಳೆಸುವೆ ನೀನು
ಸಮಾಜವ ಎದುರಿಸಲು ಧೈರ್ಯ ಕೊಡುವೆ ನೀನು
ನಿಸ್ವಾರ್ಥಿಯಾಗಿ ಬಾಳಲು ಕಲಿಸುವೆ ನೀನು

ನಿನ್ನ ಹೆಸರೇ ನನ್ನ ನಿಜವಾದ ಗುರುತು
ನನ್ನ ಜೀವನವೇ ಇದಕ್ಕೆ ಋಜುವಾತು
ನೀನೇ ನನ್ನ ಬಾಳಿನ ಜೀವತಂತು

ನನ್ನ ಯಶಸ್ಸು ನಿನಗೆ ಆನಂದ ನೀಡುವುದು
ಇಂದಿಗೆ ಬಾಳು ಸಾರ್ಥಕ ಎನಿಸುವುದು
ಧನ್ಯತೆಯ ಭಾವದಿಂದ ನಿನ್ನ ಮನ ತುಂಬುವುದು

ನಿನ್ನ ಜೀವನ ಸಂಧ್ಯೆಯಲಿ ಊರುಗೋಲಾಗುವೆ
ನನ್ನ ಮಗುವಿನಂತೆ ನಿನ್ನ ಜೋಪಾನ ಮಾಡುವೆ
ನಿನಗಾಗಿ ನನ್ನ ಜೀವನ ಮುಡಿಪಾಗಿಡುವೆ .

ಸುಜಾತ ಪ್ರಾಣೇಶ್
ಚಿತ್ರದುರ್ಗ, ಮೊ : 9986153163

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಂಬ್ಯುಲೆನ್ಸ್ ಬಂದಿದ್ದರೆ ನಟಿ ಪವಿತ್ರಾ ಬದುಕುತ್ತಿದ್ದರೇನೋ..?

    ಕನ್ನಡ ಹಾಗೂ ತೆಲುಗಿನ ಖ್ಯಾತ ನಟಿ ಪವಿತ್ರಾ ಜಯರಾಂ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರ ತೆಲುಗು ಇಂಡಸ್ಟ್ರಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ. ತ್ತಿಯನಿ ಧಾರಾವಾಹಿಯಲ್ಲಿ ತಿಲೋತ್ತಮನಾಗಿ ಎಲ್ಲರ ಗಮನ ಸೆಳೆದಿದ್ದರು.

ಜೇನುತುಪ್ಪ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಜೇನುತುಪ್ಪದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಜೇನುತುಪ್ಪದಿಂದ ಅನೇಕ ಪ್ರಯೋಜನಗಳಿವೆ. ಜೇನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ.  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಜೇನು ತುಂಬಾ ಆರೋಗ್ಯಕಾರಿ.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು. ಈ ರಾಶಿಯವರು ಬಯಸಿದ್ದೆಲ್ಲಾ ಪಡೆಯುವ ಆಶಾವಾದಿಗಳು.   ಸೋಮವಾರ ರಾಶಿ ಭವಿಷ್ಯ -ಮೇ-13,2024 ಸೂರ್ಯೋದಯ: 05:48, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!