Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

24 ವರ್ಷದ ಬಳಿಕ ತಂದೆ ನೋಡಿದ್ದು.. ಚುನಾವಣೆ ಬಂದಾಗ ಮಾತ್ರ ಆದರ್ಶ ಮಗಳು : ಯೋಗೀಶ್ವರ್ ವಿರುದ್ಧ ನಿಶಾ ಆಕ್ರೋಶ..!

---Advertisement---

ಬೆಂಗಳೂರು: ಯಾರಿಗೆ ಯಾವ ಸಮಸ್ಯೆ ಇರುತ್ತೆ ಎಂಬುದನ್ನು ಊಹಿಸುವುದಕ್ಕೆ ಆಗಲ್ಲ. ಇತ್ತಿಚೆಗಷ್ಟೇ ನಿಶಾ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರ ತಂದೆ ಬಿಜೆಪಿಯಲ್ಲಿದ್ದಾರೆ. ಸಿ.ಪಿ. ಯೋಗೀಶ್ವರ್ ಮಗಳು ಈ ರೀತಿ ಮಾಡಬಾರದು. ಕಾಂಗ್ರೆಸ್ ಪಕ್ಷ ಸೇರಬಾರದಿತ್ತು ಎಂದೇ ಚರ್ಚೆಯಾಗಿತ್ತು. ಆದರೆ ತಮ್ಮ ಮತ್ತು ತಂದೆಯ ನಡುವಿನ ಬಾಂಧವ್ಯ ಹೇಗಿದೆ..? ಅವರು ಎಷ್ಟು ದೂರ ಇದ್ದಾರೆ ಎಂಬುದನ್ನು ವಿಡಿಯೋ ಮಾಡುವ ಮೂಲಕ ಅನಾವರಣ ಮಾಡಿದ್ದಾರೆ.

ನಿಶಾ ಹಿಂದೆ ಇರುವ ಯೋಗೀಶ್ವರ್ ಹೆಸರನ್ನು ತೆಗೆದುಬಿಡಿ ಎಂದೇ ಹಲವರು ಕಮೆಂಟ್ ಹಾಕಿದ್ದರು. ಆ ಕಮೆಂಟ್ ಗೆ ಉತ್ತರಿಸಿರುವ ನಿಶಾ ಯೋಗೀಶ್ವರ್, ನನಗೆ ಹತ್ತು ವರ್ಷ ಇದ್ದಾಗಲೇ ನಮ್ಮ ತಂದೆ‌ ನನ್ನಿಂದ ದೂರ ಹೋದರು. ಚುನಾವಣಾ ಸಮಯದಲ್ಲಿ ನನ್ನನ್ನು ಕರೆಯುತ್ತಿದ್ದೆರು. ಆಗ ನಮ್ಮ ತಂದೆಯ ಪರ ಪ್ರಚಾರಕ್ಕೆ ಹೋಗುತ್ತಿದ್ದೆ. 24 ವರ್ಷದ ನಂತರ ನಾನು ಅವರನ್ನು ನೋಡುತ್ತಿದ್ದೇನೆ. ಚುನಾವಣೆ ಸಮಯದಲ್ಲಿ ಮನೆ ಮನೆಗೆ ತೆರಳಿ ತಂದೆ ಅವರ ಗೆಲುವಿಗೆ ಪ್ರಾರ್ಥನೆ ಮಾಡಿದ್ದೇನೆ. ಆಗ ನಾನು ಸಿ.ಪಿ.ಯೋಗೀಶ್ವರ್ ಅವರ ಆದರ್ಶ ಮಗಳಾಗಿದ್ದೆ.

ಈಗ ನಾನು ನನ್ನ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಈಗ ನಾನು ಅವರಿಗೆ ಆದರ್ಶ ಮಗಳಲ್ಲ. ತಂದೆ ಹೆಸರು ತೆಗೆದು ಬಿಡಿ ಎಂದು ಕಮೆಂಟ್ ಮಾಡಿರುವುದು ಯಾರು ಎಂದು ನನಗೆ ಗೊತ್ತು. ಕಮೆಂಟ್ ಮಾಡಿದವರೆಲ್ಲ ಉತ್ತರಿಸಿ. ತಂದೆ ಹೆಸರನ್ನು ತೆಗೆಯುವುದು ಹೇಗೆ. ಆಧಾರ್ ಕಾರ್ಡ್, ಪಾಸ್ ಪೋರ್ಟ್ ನಲ್ಲೂ ಹೆಸರು ಬದಲಿಸಬೇಕು. ಹೆಸರು ತೆಗೆದ ಮಾತ್ರಕ್ಕೆ ಸಿ.ಪಿ ಯೋಗೀಶ್ವರ್ ನನ್ನ ತಂದೆ ಅಲ್ಲ ಅನ್ನುವುದಕ್ಕೆ ಆಗುತ್ತಾ. ಭಗವಂತನ ಇಚ್ಛೆಯಿಂದ ನಾನು ಅವರ ಮಗಳಾಗಿ ಹುಟ್ಟಿದ್ದೇನೆ. ಕಳೆದ 20 ವರ್ಷದಿಂದ ನಮ್ಮ ಚಿಕ್ಕಮ್ಮನ ಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸ್ವಂತ ಮಗಳಾದ ನಾನು ಅವರ ಜೊತೆ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment