Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

24 ವರ್ಷದ ಬಳಿಕ ತಂದೆ ನೋಡಿದ್ದು.. ಚುನಾವಣೆ ಬಂದಾಗ ಮಾತ್ರ ಆದರ್ಶ ಮಗಳು : ಯೋಗೀಶ್ವರ್ ವಿರುದ್ಧ ನಿಶಾ ಆಕ್ರೋಶ..!

Facebook
Twitter
Telegram
WhatsApp

ಬೆಂಗಳೂರು: ಯಾರಿಗೆ ಯಾವ ಸಮಸ್ಯೆ ಇರುತ್ತೆ ಎಂಬುದನ್ನು ಊಹಿಸುವುದಕ್ಕೆ ಆಗಲ್ಲ. ಇತ್ತಿಚೆಗಷ್ಟೇ ನಿಶಾ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರ ತಂದೆ ಬಿಜೆಪಿಯಲ್ಲಿದ್ದಾರೆ. ಸಿ.ಪಿ. ಯೋಗೀಶ್ವರ್ ಮಗಳು ಈ ರೀತಿ ಮಾಡಬಾರದು. ಕಾಂಗ್ರೆಸ್ ಪಕ್ಷ ಸೇರಬಾರದಿತ್ತು ಎಂದೇ ಚರ್ಚೆಯಾಗಿತ್ತು. ಆದರೆ ತಮ್ಮ ಮತ್ತು ತಂದೆಯ ನಡುವಿನ ಬಾಂಧವ್ಯ ಹೇಗಿದೆ..? ಅವರು ಎಷ್ಟು ದೂರ ಇದ್ದಾರೆ ಎಂಬುದನ್ನು ವಿಡಿಯೋ ಮಾಡುವ ಮೂಲಕ ಅನಾವರಣ ಮಾಡಿದ್ದಾರೆ.

ನಿಶಾ ಹಿಂದೆ ಇರುವ ಯೋಗೀಶ್ವರ್ ಹೆಸರನ್ನು ತೆಗೆದುಬಿಡಿ ಎಂದೇ ಹಲವರು ಕಮೆಂಟ್ ಹಾಕಿದ್ದರು. ಆ ಕಮೆಂಟ್ ಗೆ ಉತ್ತರಿಸಿರುವ ನಿಶಾ ಯೋಗೀಶ್ವರ್, ನನಗೆ ಹತ್ತು ವರ್ಷ ಇದ್ದಾಗಲೇ ನಮ್ಮ ತಂದೆ‌ ನನ್ನಿಂದ ದೂರ ಹೋದರು. ಚುನಾವಣಾ ಸಮಯದಲ್ಲಿ ನನ್ನನ್ನು ಕರೆಯುತ್ತಿದ್ದೆರು. ಆಗ ನಮ್ಮ ತಂದೆಯ ಪರ ಪ್ರಚಾರಕ್ಕೆ ಹೋಗುತ್ತಿದ್ದೆ. 24 ವರ್ಷದ ನಂತರ ನಾನು ಅವರನ್ನು ನೋಡುತ್ತಿದ್ದೇನೆ. ಚುನಾವಣೆ ಸಮಯದಲ್ಲಿ ಮನೆ ಮನೆಗೆ ತೆರಳಿ ತಂದೆ ಅವರ ಗೆಲುವಿಗೆ ಪ್ರಾರ್ಥನೆ ಮಾಡಿದ್ದೇನೆ. ಆಗ ನಾನು ಸಿ.ಪಿ.ಯೋಗೀಶ್ವರ್ ಅವರ ಆದರ್ಶ ಮಗಳಾಗಿದ್ದೆ.

ಈಗ ನಾನು ನನ್ನ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಈಗ ನಾನು ಅವರಿಗೆ ಆದರ್ಶ ಮಗಳಲ್ಲ. ತಂದೆ ಹೆಸರು ತೆಗೆದು ಬಿಡಿ ಎಂದು ಕಮೆಂಟ್ ಮಾಡಿರುವುದು ಯಾರು ಎಂದು ನನಗೆ ಗೊತ್ತು. ಕಮೆಂಟ್ ಮಾಡಿದವರೆಲ್ಲ ಉತ್ತರಿಸಿ. ತಂದೆ ಹೆಸರನ್ನು ತೆಗೆಯುವುದು ಹೇಗೆ. ಆಧಾರ್ ಕಾರ್ಡ್, ಪಾಸ್ ಪೋರ್ಟ್ ನಲ್ಲೂ ಹೆಸರು ಬದಲಿಸಬೇಕು. ಹೆಸರು ತೆಗೆದ ಮಾತ್ರಕ್ಕೆ ಸಿ.ಪಿ ಯೋಗೀಶ್ವರ್ ನನ್ನ ತಂದೆ ಅಲ್ಲ ಅನ್ನುವುದಕ್ಕೆ ಆಗುತ್ತಾ. ಭಗವಂತನ ಇಚ್ಛೆಯಿಂದ ನಾನು ಅವರ ಮಗಳಾಗಿ ಹುಟ್ಟಿದ್ದೇನೆ. ಕಳೆದ 20 ವರ್ಷದಿಂದ ನಮ್ಮ ಚಿಕ್ಕಮ್ಮನ ಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸ್ವಂತ ಮಗಳಾದ ನಾನು ಅವರ ಜೊತೆ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು : ಲಗ್ಗೆರೆ ನಾರಾಯಣಸ್ವಾಮಿ

ಸುದ್ದಿಒನ್, ಚಿತ್ರದುರ್ಗ, ಜೂನ್.23 :ಯಾವುದೇ ವ್ಯಕ್ತಿ ತಪ್ಪು ಮಾಡಿದಾಕ್ಷಣ ಆತನನ್ನು ಹಿಂಸಿಸುವುದು, ಹತ್ಯೆ ಮಾಡುವ ಹಂತಕ್ಕೆ ಹೋಗುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ಕೊಡಿಸಬೇಕು ಎಂದು ಬೆಂಗಳೂರಿನ ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ

ನಾಳೆಯಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ : ಸಂಸದರ ಪ್ರಮಾಣ ವಚನ ಸ್ವೀಕಾರ ಹೇಗಿರಲಿದೆ ಗೊತ್ತಾ ?

ಸುದ್ದಿಒನ್, ನವದೆಹಲಿ, ಜೂನ್. 23 : 18ನೇ ಲೋಕಸಭೆಯ ಮೊದಲ ಅಧಿವೇಶನ ನಾಳೆ ಆರಂಭವಾಗಲಿದೆ. ಜೂನ್ 24 ರಂದು ಬೆಳಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗಲಿದೆ. ಮೊದಲಿಗೆ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣ

ಷಡ್ಯಂತ್ರಕ್ಕೆಲ್ಲಾ ನಾನು ಹೆದರುವುದಿಲ್ಲ : ಸೂರಜ್ ಬಂಧನದ ಬಳಿಕ ರೇವಣ್ಣ ಪ್ರತಿಕ್ರಿಯೆ

ಅಸಹಜ ಲೈಂಗಿಕ ಕ್ರಿಯೆ ಆರೋಪದ ಮೇಲೆ ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಅವರ ಬಳಿ ಇದ್ದ ಮೊಬೈಲ್ ಸೀಜ್ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್.ಡಿ. ರೇವಣ್ಣ

error: Content is protected !!