Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೂರು ರಾಜ್ಯಗಳ ರೈತರು ಖುಷಿ ಪಡೋ ಸುದ್ದಿ : ಮತ್ತೆ ಭರ್ತಿಯಾಯ್ತು ತುಂಗಾ ಭದ್ರಾ ನದಿ

Facebook
Twitter
Telegram
WhatsApp

 

 

ಬಳ್ಳಾರಿ: ಗೇಟ್ ಮುರಿದು ಬಿದ್ದು ತುಂಗಾ ಭದ್ರಾ ನದಿಯಲ್ಲಿದ್ದ ನೀರು ಅನಿವಾರ್ಯವಾಗಿ ಹೊರಗೆ ಬಿಡಲೇಬೇಕಾಗಿತ್ತು. ತುಂಗಾಭದ್ರಾ ನದಿ ನೀರಿನಿಂದ ಮೂರು ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಗೇಟ್ ಸರಿಯಾದ ಮೇಲೆ ನೀರಿನ ಬಗ್ಗೆಯೇ ರೈತರಿಗೆ ಚಿಂತೆಯಾಗಿತ್ತು. ಇದೀಗ ಆ ಚಿಂತೆ ಕಳೆದಿದೆ, ನೀರು ಮತ್ತೆ ಭರ್ತಿಯಾಗಿದೆ.

ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದರೆ ತುಂಗಾಭದ್ರಾ ಡ್ಯಾಂ ತುಂಬುವ ನಿರೀಕ್ಷೆ ಇತ್ತು. ಅದರಂತೆ ಗೇಟ್ ರಿಪೇರಿ ಕಾರ್ಯದ ಬಳಿಕ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗಿದೆ. ಹೀಗಾಗಿ ನಿರೀಕ್ಷೆಗೂ ಮೀರಿ ಬಹಳ ಬೇಗನೇ ತುಂಗಾಭದ್ರಾ ಡ್ಯಾಂ ಭರ್ತಿಯಾಗಿದೆ. ಇದರಿಂದ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಸಂತಸವೂ ಹೆಚ್ಚಾಗಿದೆ.

‘ಎಲ್ಲರ ಪ್ರಾರ್ಥನೆಯಿಂದ, ವರುಣನ ಕೃಪೆಯಿಂದ ತುಂಗಾಭದ್ರಾ ಡ್ಯಾಂ ಮತ್ತೆ ತುಂಬಿದೆ. ಹೆಚ್ಚುವರಿ ನೀರನ್ನು ನದಿಗೆ ಕ್ರೈಸ್ಟ್ ಗೇಟ್ ಮುಖಾಂತರ ಬಿಡಲಾಗುವುದು’ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. ತುಂಗಾ ಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರು ಜಾಸ್ತಿಯಾದಾಗಲೇ ಭರ್ತಿಯಾಗುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಗೇಟ್ ಕಿತ್ತುಕೊಂಡು ಬಿಟ್ಟಿತ್ತು. ದುರಸ್ತಿ ಕಾರ್ಯ ನಡೆಯುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ನೀರು ತುಂಬುತ್ತೆ ಎಂಬ ಭರವಸೆಯನ್ನು ನೀಡಿದ್ದರು. ಇದೀಗ ಅದು ಸತ್ಯವಾಗಿದೆ. ತುಂಗಾಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ: 1631.92 ಅಡಿ ಇದೆ. ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ : 105.788 ಟಿಎಂಸಿಯನ್ನು ಹೊಂದಿದೆ. ಕಳೆದ 24 ಗಂಟೆಯ ಒಳಹರಿವು ಸರಾಸರಿ : 39945 ಕ್ಯುಸೆಕ್ ಆಗಿದೆ. ಇನ್ನು ಕಳೆದ 24 ಗಂಟೆಯ ಹೊರ ಹರಿವು : 15235 ಕ್ಯುಸೆಕ್ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM’

  ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ. ಬಿಡುಗಡೆಯಾದ 4

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

  ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು

ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ : ರಾಜ್ಯಾಧ್ಯಕ್ಷರ ಮೇಲೆ ಕಿಡಿಕಾರಿದ ರಮೇಶ್ ಜಾರಕಿಹೊಳಿ

  ಬೆಳಗಾವಿ: ಯಡಿಯೂರಪ್ಪ ಅವರಿಗೆ ನಾನು ವಿರೋಧಿಯಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ‌ ಪಕ್ಷದ ನಾಯಕನಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟ

error: Content is protected !!