ಸಾಲ ಕೊಡುವ, ತೆಗೆದುಕೊಳ್ಳುವ ಮುನ್ನ ಎಚ್ಚರ : ಹಣ ವಾಪಾಸ್ ಮಾಡಲಿಲ್ಲ ಅಂತ ರೈತನೊಬ್ಬ ಆತ್ಮಹತ್ಯೆ..!

suddionenews
1 Min Read

ಯಾದಗಿರಿ: ತನ್ನ ಸ್ನೇಹಿತನನ್ನು ನಂಬಿ ಹಣ ಕೊಟ್ಟಿದ್ದ ಆತ. ಆದ್ರೆ ತೆಗೆದುಕೊಂಡ ಹಣವನ್ನ ಸ್ನೇಹಿತ ವಾಪಾಸ್ ಮಾಡಲೇ ಇಲ್ಲ. ಅದರಿಂದ ನೊಂದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ನಡೆದಿದೆ. 55 ವರ್ಷದ ರಾಮ್ ಮೋಹನ್ ಆತ್ಮಹತ್ಯೆಗೆ ಶರಣಾದ ರೈತ.

ರಾಮ ಮೋಹನ್ ಆಂಧ್ರಪ್ರದೇಶ ಮೂಲದವರು. ಇವರಿಗೆ ರಮೇಶ್ ಎಂಬ ಸ್ನೇಹಿತನಿದ್ದರಂತೆ. ಈತನಿಗೆ ರಾಮ ಮೋಹನ್ ಸುಮಾರು 4.5 ಲಕ್ಷ ಹಣ ಕೊಟ್ಟಿದ್ದರಂತೆ. ಕಷ್ಟ ಎಂದಾಗ ಹಣ ಕೊಟ್ಟು ಬಳಿಕ ಆತನಿಂದ ಹಣ ವಾಪಾಸ್ ಸಿಗಲೇ ಇಲ್ಲವಂತೆ.

ಎಷ್ಟೇ ಸಲ ವಾಪಾಸ್ ಕೇಳಿದ್ರುಹಣವನ್ನ ವಾಪಾಸ್ ನೀಡಿರಲಿಲ್ಲವಂತೆ. ಇದರಿಂದ ಮನನೊಂದ ರಾಮ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Share This Article
Leave a Comment

Leave a Reply

Your email address will not be published. Required fields are marked *