ಸಿಟಿ ಇನ್ಸ್‌ಟಿಟ್ಯೂಟ್ ನಿಂದ ಕವಿತಾ ಎಸ್.ಮನ್ನಿಕೇರಿಯವರಿಗೆ ಬೀಳ್ಕೊಡುಗೆ

0 Min Read

 

ಚಿತ್ರದುರ್ಗ : ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಚಿತ್ರದುರ್ಗದಿಂದ ವರ್ಗಾವಣೆಗೊಂಡಿರುವ ಕವಿತಾ ಎಸ್.ಮನ್ನಿಕೇರಿರವರಿಗೆ ಸಿಟಿ ಇನ್ಸ್‌ಟಿಟ್ಯೂಟ್ ನಿಂದ ಶನಿವಾರ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಸಿಟಿ ಇನ್ಸ್ಟಿಟ್ಯೂಟ್ ಉಪಾಧ್ಯಕ್ಷ ಎಂ.ಎ.ಸೇತೂರಾಂ, ಕಾರ್ಯದರ್ಶಿ ಬಿ.ಚಿತ್ರಲಿಂಗಪ್ಪ, ಖಜಾಂಚಿ ವಿ.ಎನ್.ಅಜಿತ್‍ಪ್ರಸಾದ್ ಜೈನ್, ನಿರ್ದೇಶಕರುಗಳಾದ ಅನ್ವರ್‍ಪಾಷ, ಪಿ.ವೀರೇಂದ್ರಕುಮಾರ್, ಸತೀಶ್ ಎಂ. ಅರುಣ ಎಸ್.ವಿ. ಇವರುಗಳು ಕವಿತಾ ಎಸ್.ಮನ್ನಿಕೇರಿ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಸಿಟಿ ಇನ್ಸ್‌ಟಿಟ್ಯುಟ್ ಸದಸ್ಯರು ಹಾಗೂ ಟೆನ್ನಿಸ್ ಆಟಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *