ಬಿಜೆಪಿಯಿಂದ ಶಾಸಕ ಉಚ್ಛಾಟನೆ : ಸ್ವಾಗತ ಎಂದ ಮಾಡಾಳು ವಿರೂಪಾಕ್ಷಪ್ಪ..!

1 Min Read

 

ದಾವಣಗೆರೆ: ಮಾಡಾಳು ವಿರೂಪಾಕ್ಷಪ್ಪ ಅವರ ಮಗ ಮಾಡಾಳು ಪ್ರಶಾಂತ್ ಲಕ್ಷ ಲಕ್ಷ ಲಂಚ ತೆಗೆದುಕೊಳ್ಳುವಾಗಲೇ ಸಿಕ್ಕಿಬಿದ್ದು, ಕಂಬಿ ಹಿಂದೆ ಕೂತಿರುವಾಗ, ಈ ಕಡೆ ಜಾಮೀನು ಸಿಕ್ತು ಅಂತ ವಿರೂಪಾಕ್ಷಪ್ಪ ಮೆರವಣಿಗೆ ಮೇಲೆ ಬಂದಿದ್ದಾರೆ. ಮಗನ ಎಲ್ಲಾ ಲಂಚ ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದಾರೆ. ಈ ಹಿನ್ನೆಲೆ ಬಿಜೆಪಿ ಪಕ್ಷದಿಂದಾನೇ ಉಚ್ಛಾಟನೆ ಮಾಡಿದೆ.

ಈ ಬಗ್ಗೆ ಮೆರವಣಿಗೆಯಲ್ಲಿ ಅದ್ದೂರಿಯಾಗಿ ಬಂದ ವಿರೂಪಾಕ್ಷಪ್ಪ ಮಾತನಾಡಿ, ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದಾಗಿ ಹೇಳಿದ್ದರು. ನಾನು ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ನನ್ನ ಮೇಲೆ ಆರೋಪ ಕೇಳಿ ಬಂದಾಗ ದೇಶದ ದೊಡ್ಡ ಪಕ್ಷಕ್ಕೆ ಕಳಂಕವಾಗಬಾರದು. ನಾನು ದೋಷಮುಕ್ತನಾದ ಮೇಲೆ ಮತ್ತೆ ಬಿಜೆಪಿ ಸೇರಿಕೊಳ್ಳುತ್ತೇನೆ ಎಂದಿದ್ದಾರೆ.

ಇನ್ನು ಮಾಡಾಳು ವಿರೂಪಾಕ್ಷಪ್ಪ ಕಳೆದ ಒಂದು ವಾರದಿಂದ ಯಾರಿಗೂ ಸಿಗದೆ ಎಸ್ಕೇಪ್ ಆಗಿದ್ದರು. ಅರೆಸ್ಟ್ ಆಗುವ ಭಯದಿಂದ ತಲೆ ಮರೆಸಿಕೊಂಡಿದ್ದರು. ಇಂದು ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಮೇಲೆ ತೆರೆದ ವಾಹನದಲ್ಲಿ, ಬೆಂಬಲಿಗರೊಂದಿಗೆ ತಮಟೆಯ ಸದ್ದಿನೊಂದಿಗೆ, ಮೆರವಣಿಗೆ ಮೂಲಕ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *