ಈಶ್ವರಪ್ಪ ಮತ್ತೆ ಸಚಿವರಾಗ್ತಾರೆ ಅನ್ನೋ ನಂಬಿಕೆ ನನಗಿದೆ : ಮಾಜಿ ಸಿಎಂ ಯಡಿಯೂರಪ್ಪ

suddionenews
1 Min Read

ಶಿವಮೊಗ್ಗ: ಆತ್ಮಹತ್ಯೆಗೆ ಇವರೇ ಕಾರಣ ಎಂಬುದು ಡೆತ್ ನೋಟ್ ನಲ್ಲಿ ಇರುವ ಕಾರಣ ಸಚಿವ ಈಶ್ವರಪ್ಪ ಇಂದಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ನವರ ಒತ್ತಾಯವಿದ್ದರು ನಾನು ಯಾವುದೇ ಕಾರಣಕ್ಕು ರಾಜೀನಾಮೆ ಕೊಡುವುದಿಲ್ಲ ಎಂದಿದ್ದ ಈಶ್ವರಪ್ಪ, ನಿನ್ನೆ ಸಂಜೆ ದಿಢೀರನೆ ರಾಜೀನಾಮೆ ಘೋಷಿಸಿದ್ದರು. ಈ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ, ಈಶ್ವರಪ್ಪ ಅವರು ಮತ್ತೆ ಸಚಿವರಾಗುತ್ತಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅನಿವಾರ್ಯ ಪರಿಸ್ಥಿತಿಯಿಂದ ಈಶ್ವರಪ್ಪ ಅವರು ರಾಜೀನಾಮೆ ಕೊಡುವುದಕ್ಕೆ ಹೊರಟಿದ್ದಾರೆ. ಇನ್ನು ಎರಡ್ಮೂರು ತಿಂಗಳಲ್ಲಿ ತನಿಖೆಯನ್ನು ಪೂರ್ಣ ಮಾಡಿದ್ರೆ ಇದರಲ್ಲಿ ಅವರದ್ದೇನು ಪಾತ್ರ ಇಲ್ಲಾ ಅನ್ನೋದು ಪ್ರೂವ್ ಆಗುತ್ತೆ. ಮತ್ತೊಮ್ಮೆ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಅನಿವಾರ್ಯ ಕಾರಣಕ್ಕಾಗಿ, ಯಾವುದೋ ಒತ್ತಾಯಕ್ಕೆ ಮಣಿದು ರಾಜೀನಾಮೆ ನೀಡುತ್ತಿದ್ದಾರೆ.

ಇದನ್ನು ಖಂಡಿತ ಅವರು ಎದುರಿಸುತ್ತಾರೆ. ಅಷ್ಟೇ ಅಲ್ಲ ಇದರಿಂದ ಹೊರ ಬಂದು ಮತ್ತೆ ಸಚಿವರಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ನಾನು ಬಯಸುತ್ತೇನೆ. ಮತ್ತೊಮ್ಮೆ ಸಚಿವರಾಗಿ ವಾಪಸ್ಸು ಬಂದೇ ಬರುತ್ತಾರೆ. ತನಿಖೆ ಮುಗಿದ ಬಳಿಕ ನಿರಪರಾಧಿಯಾಗಿ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪನವರು.

Share This Article
Leave a Comment

Leave a Reply

Your email address will not be published. Required fields are marked *