ಅಪ್ಪ ಅಮ್ಮನಿಗೆ ಹುಟ್ಟಿರೋದು ಎಂಬ ಪ್ರಕಾಶ್ ರೈ ಹೇಳಿಕೆಗೆ ಅದು ಗ್ಯಾರಂಟಿನಾ ಎಂದು ಕೇಳಿದ ಈಶ್ವರಪ್ಪ..!

1 Min Read

 

 

ಬಾಗಲಕೋಟೆ: ಸನಾತನ ಧರ್ಮದ ವಿಚಾರವಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಪ್ರಕಾಶ್ ರೈ ನೀಡಿದ ಒಂದು ಹೇಳಿಕೆಗೆ ಬಿಜೆಪಿಯ ಮಾಜಿ ಸಚಿವ ಈಶ್ವರಪ್ಪ ಗರಂ ಆಗಿದ್ದಾರೆ. ನಾನು ಸನಾತನ ಧರ್ಮಕ್ಕೆ ಹುಟ್ಟಿರೋದಲ್ಲ, ನಮ್ಮ ಅಪ್ಪ ಅಮ್ಮನಿಗೆ ಹುಟ್ಟಿರೋದು ಅಂತ ಪ್ರಕಾಶ್ ರೈ ಹೇಳಿದ್ದರು. ಅದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಈಶ್ವರಪ್ಪ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸದ್ಯ ಅದಾದರೂ ಗ್ಯಾರಂಟಿನಾ..? ನಮ್ಮ ಅಪ್ಪ ಯಾರೂ ಅಂತ ಅವರಮ್ಮನಿಗೆ ಕೇಳಿದ್ದಾನೋ ಇಲ್ವೋ ಗೊತ್ತಿಲ್ಲ. ಕೆಲವರು ಇಂಥವರಿಗೆ ನೇರವಾಗಿ ಹುಚ್ಚ ಅಂದರು ಇವರಿಗೆ ಬೇಜಾರು ಆಗಲ್ಲ. ಇವರು ಅಯೋಗ್ಯರು ಎಂದರು ಇವರಿಗೆ ಬೇಜಾರು ಆಗಲ್ಲ. ಅಂತವರ ಬಗ್ಗೆ ಮಾತನಾಡುವುದೇ ಬೇಡ ಎಂದಿದ್ದಾರೆ.

ಇನ್ನು ನಿನ್ನೆ‌ವಬೆಂಗಳೂರಿನಲ್ಲಿ ಗೌರಿ ನೆನಪು ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಕೂಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಟ್ವಿಟ್ಟರ್ ನಲ್ಲಿ ಸಮಾತನಿ ಸಂಸತ್ ಎಂದು ಟ್ವೀಟ್ ಮಾಡಿದ್ದೆ. ಅದಕ್ಕೆ ಒಬ್ಬ ಕೇಳಿದ ನೀನು ಸನಾತನ ಧರ್ಮ ಅಲ್ವಾ‌ ಎಂದು ಕೇಳಿದ. ಅದಕ್ಕೆ ನಾನು ಹೇಳಿದೆ‌ ನಾನು ಸನಾತನ ಧರ್ಮಕ್ಕೆ ಹುಟ್ಟಿದವನಲ್ಲ.‌ ನನ್ನ ಅಪ್ಪ ಅಮ್ಮನಿಗೆ ಹುಟ್ಟಿರೋದು ಎಂದು ಹೇಳಿದೆ ಎಂದರು. ಈ ಹೇಳಿಕೆ ಸಾಕಷ್ಟು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ಪ್ರಕಾಶ್ ವಿರುದ್ಧ ಹಲವರು ತಿರುಗಿ ಬಿದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *