Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಯನಾಡಿನಲ್ಲಿ ಕಾರ್ಯಾಚರಣೆ ಅಂತ್ಯ : ಸಾವು-ಬದುಕಿನ ನಡುವೆ ಹೋರಾಡಿದ ಯೋಧರಿಗೆ ಬಿಳ್ಕೊಡುಗೆ

Facebook
Twitter
Telegram
WhatsApp

 

ವಯನಾಡ್: ಕೇರಳದ ವಯನಾಡಿನ ಪರಿಸ್ಥಿತಿಯನ್ನ ಈಗ ನೋಡಿದರೂ ನೋವಾಗುತ್ತದೆ. ಕನಸು ಕಂಡು ಮನೆ ಕಟ್ಟಿದವರು, ಬದುಕು ಕಟ್ಟಿಕೊಳ್ಳಬೇಕೆಂದು ಹೋದವರು ಯಾರೂ ಉಳಿದಿಲ್ಲ. ಮಣ್ಣಿನಡಿ ಸಿಲುಕಿ ಜೀವ ಬಿಟ್ಟಿದ್ದಾರೆ. ಸಾವಿನ ಸಂಖ್ಯೆ 400ಕ್ಕೆ ತಲುಪಿದ. ಇಷ್ಟು ಕಷ್ಟದ ಸ್ಥಿತಿಯಲ್ಲೂ ಎಲ್ಲರನ್ನು ಕಾಪಾಡುವ ರಿಸ್ಕ್ ತೆಗೆದುಕೊಂಡಿದ್ದು ನಮ್ಮ ಹೆಮ್ಮೆಯ ಯೋಧ ಪಡೆ.

https://x.com/airnews_mumbai/status/1821768337434570957?t=IO0l1iv0foiUlncxZ033tw&s=19

ಸುಮಾರು 21 ಎಕರೆಯಷ್ಟು ಸ್ಥಳದಲ್ಲಿ ಗುಡ್ಡ ಕುಸಿತ ಕಂಡಿತ್ತು. ನೀರು ರಭಸವಾಗಿ ಹರಿಯುತ್ತಿತ್ತು. ಅಲ್ಲಿಗೆ ಧಾವಿಸಿದ್ದು ಎನ್ಡಿಆರ್ಎಫ್ ಹಾಗೂ ರಸ್ಡಿಆರ್ಎಫ್ ತಂಡ ಮತ್ತು ಭಾರತೀಯ ನೌಕಾದಳ. ಹಗಲು, ರಾತ್ರಿ ಎನ್ನದೆ ಜೀವ ಭಯ ಬಿಟ್ಟು ಜೀವ ಇದ್ದವರನ್ನ ದಡ ಸೇರಿಸಿದ್ದರು. ಸದ್ಯ ಮಳೆಯ ಪ್ರಮಾಣವೂ ತಗ್ಗಿದೆ. ಕಾರ್ಯಾಚರಣೆ ಅಂತ್ಯಗೊಂಡಿದೆ. ಹೀಗಾಗಿ ಯೋಧರನ್ನ ಕೇರಳದ ಜನತೆ ಗೌರವ ಪೂರತವಕವಾಗಿ ವಂದಿಸಿ, ಕಳುಹಿಸಿಕೊಟ್ಟಿದ್ದಾರೆ. ಮೌಂಟ್ ಟಾಬರ್ ಶಾಲೆಯಿಂದ ಹೊರಟಿದ್ದಾರೆ.

122 ಇನ್ ಫೆಂಟ್ರಿ ಬ್ಯಾಟಲಿಯನ್ ಟೀಂ ಸತತ 10 ದಿನಗಳ ಕಾಲ ರಕ್ಷಣಾ‌ ಕಾರ್ಯಾಚರಣೆ ನಡೆಸಿದೆ. ಮೇಜರ್ ಜನರಲ್ ಮ್ಯಾಥೀವ್ ಅವರ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಜನರ ರಕ್ಷಣೆಗೆಂದು ನಿಂತಿದ್ದರು. ಇಷ್ಟು ಕಷ್ಟದ ಸಮಯದಲ್ಲಿ ಪ್ರಾಣವನ್ನು ಕಾಪಾಡಿದ ಯೋಧರಿಗೆ ಜನ ಗೌರವ ಸಲ್ಲಿಸಲೇಬೇಕು ಅಲ್ವಾ. ಚಪ್ಪಾಳೆ ತಟ್ಟುವ ಮೂಲಕ, ಭಾರತ ಮಾತಾಕೀ ಜೈ ಎಂದು ಹೇಳಿ ಒಂದು ಸಲಾಂ ಹೊಡೆದು ಬಿಳ್ಕೊಡಿಗೆ ನೀಡಿದ್ದಾರೆ. ನಿಮ್ಮ ಉಪಕಾರವನ್ನು ಎಂದಿಗೂ ಮರೆಯಲಾರೆವು ಎಂಬ ಸಂದೇಶವನ್ನು ಕೇರಳ ಜನತೆ ಸಾರಿದ್ದಾರೆ. ಈ ವಿಡಿಯೋವನ್ನು ಕೊಚ್ಚಿ ಡಿಫೆನ್ಸ್ ಪಿಆರ್ಓ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!