Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಅತಿಯಾದ ಮಳೆಯಿಂದ ದಾವಣಗೆರೆ ಶೇಂಗಾ ಬೆಳೆಗಾರರಿಗೆ ಶಾಕ್ : ಗುಣಮಟ್ಟದ ಶೇಂಗಾವೇ ಇಲ್ಲ..!

---Advertisement---

 

 

ದಾವಣಗೆರೆ: ಮಾರುಕಟ್ಟೆಯಲ್ಲಿ ಶೇಂಗಾಗೆ ಉತ್ತಮ ಬೆಲೆ ಇದೆ. ಇದು ಶೇಂಗಾ ಬೆಳೆಗಾರರಿಗೆ ಸಕಾರವಾಗಿತ್ತು. ಆದರೆ ಹವಮಾನ ವೈಪರೀತ್ಯವೂ ರೈತರಿಗೆ ಸಹಕಾರ ಕೊಡಬೇಕಲ್ಲ..? ಬೆಲೆ ಇದ್ದರು ಬೆಳೆ ಚೆನ್ನಾಗಿ ಬಂದಿಲ್ಲದೆ ಇರುವುದೇ ರೈತರಿಗೆ ಬೇಸರ ಉಂಟು ಮಾಡಿದೆ. ರಾಜ್ಯ ಸರ್ಕಾರ ಕೂಡ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಲು ಖರೀದಿ ಕೇಂದ್ರ ಆರಂಭಿಸಿತ್ತು. ಆದರೆ ಮಾರುಕಟ್ಟೆಗೆ ಗುಣಮಟ್ಟದ ಶೇಂಗಾವೇ ಬರುತ್ತಿಲ್ಲ ಎಂಬುದೇ ಬೇಸರವಾಗಿದೆ.

ದಾವಣಗೆರೆಯ ಜಗಳೂರು, ನ್ಯಾಮತಿ ತಾಲೂಕುಗಳಲ್ಲಿ ಸೂರ್ಯಕಾಂತಿ ಬೆಳೆಯನ್ನು ಬೆಳೆಯಲಾಗಿದೆ. ಉಳಿದಂತೆ ಹಲವು ಭಾಗಗಳಲ್ಲಿ ಶೇಂಗಾ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಜಿಲ್ಲೆಯಲ್ಲಿ ಆರಂಭವಾದ ಅನಾವೃಷ್ಠಿ, ನಂತರ ಮಳೆ ಅತಿವೃಷ್ಠಿಯಿಂದಾಗಿ ಶೇಂಗಾ ಬೆಳೆ ಮೇಲೆ ಪರಿಣಾಮ ಬೀರಿದೆ. ಹೂವಾಗಿ, ಕಾಳು ದಪ್ಪವಾಗಬೇಕು ಎನ್ನುವಾಗಲೇ ನಿರಂತರ ಮಳೆ ಸುರಿದು ಶೇಂಗಾ ಬೀಜದ ಗಾತ್ರ ದಪ್ಪವೇ ಆಗಿಲ್ಲ. ಒಂದಷ್ಟು ಟೊಳ್ಳು ಬೀಜಗಳೇ ಬಂದಿವೆ. ಜೊತೆಗೆ ಬಣ್ಣವೂ ಸರಿಯಾಗಿ ಬಂದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಶೇಂಗಾವನ್ನು ತೆಗೆದುಕೊಳ್ಳುವುದೇ ಕಷ್ಟವಾಗಿದೆ. ತೆಗೆದುಕೊಂಡರು ಬೆಂಬಲ ಬೆಲೆ ನೀಡುವುದು ಕಷ್ಟವಾಗಿದೆ‌.

ಜಿಲ್ಲೆಯಲ್ಲಿ ಸುಮಾರು 13,770 ಹೆಕ್ಟೇರ್ ನಷ್ಟು ಶೇಂಗಾ ಬೆಳೆ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಮಳೆ ಕೊರತೆಯಾಗಿತ್ತು. ಆದರೆ ಆಮೇಲೆ ವರುಣರಾಯ ಕೃಪೆ ತೋರಿದ್ದ. ಆಮೇಲೆ ಅತಿಯಾದ ಮಳೆಯೆ ಬೆಳೆಗೆ ಹಾನಿ ಮಾಡಿದೆ. ಸುಗ್ಗಿಗೂ ಮುನ್ನ ಶೇಂಗಾ ಬೆಳೆ ಕ್ವಿಂಟಾಲ್ ಗೆ 7 ಸಾವಿರ ದಾಟಿತ್ತು. ಕೇಂದ್ರ ಸರ್ಕಾರ 6,783 ರೂಪಾಯಿ ಬೆಂಬಲ ಬೆಲೆಯನ್ನು ನೀಡಿತ್ತು. ಆದರೆ ಈಗ ಸುಗ್ಗಿ ಶುರುವಾಗಿದೆ. ಆದರೆ 2,500 ರಿಂದ ಗರಿಷ್ಠ 4,500 ರೂಪಾಯಿ ಸಿಗ್ತಾ ಇದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...