ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಹುಬ್ಬಳ್ಳಿ: ಶಿವಸೇನೆಯನ್ನೆ ಒದ್ದು ಕಳುಹಿಸಿದರು. ಇವರ ಸೀಟು ಜಾಸ್ತಿ ಬಂದ ಕೂಡಲೇ ಅವರನ್ನೇ ಮುಗಿಸಿಬಿಟ್ಟರು. ಜೆಡಿಎಸ್ ಯಾವಾಗ ಮುಗಿಸುತ್ತಾರೆ ಎಂಬುದನ್ನು ಹೇಳುವುದಕ್ಕೆ ಬರುವುದಿಲ್ಲ. ಪರಿಸ್ಥಿತಿ ಅದೇ ಆಗುತ್ತೆ. ಇವತ್ತು ಅವರಿಗೂ ಪರಿಸ್ಥಿತಿ ಇತ್ತು, ಇವರಿಗೂ ಪರಿಸ್ಥಿತಿ ಇದೆ. ಪಂಜಾಬ್ ನಲ್ಲಿ ಅಕಾಳ ದಳದ ಸ್ಥಿತಿ ಏನಾಗಿದೆ. ಅದನ್ನು ಮುಗಿಸಿ ಕಳುಹಿಸಿದ್ರು. ಈ ರೀತಿ ರಾಜಕೀಯ ನಡೆಸಿದರೆ ಪ್ರಜಾಪ್ರಭುತ್ವ ಅಂತಾರ ಹೇಳಿ ಎಂದು ಪ್ರಶ್ನಿಸಿದ್ದಾರೆ.
ರಾಮ ಮಂದಿರದ ದೇಣಿಗೆ ಬಗ್ಗೆ ಮಾತನಾಡಿದ್ದು, ಈ ಹಿಂದೆ ಹುಬ್ಬಳ್ಳಿಯಲ್ಲಿ ನಾನೇ ಒಂದು ಸಭೆ ಮಾಡಿದ್ದೆ. ಆ ಸಭೆಯಲ್ಲಿ ಹಲವರು ಸೇರಿದ್ದರು. ಆಗ ಸುಮಾರು ಎರಡು ಕೋಟಿಯಷ್ಟು ಹಣವನ್ನು ನಾನೇ ಸಂಗ್ರಹ ಮಾಡಿಕೊಟ್ಟಿದ್ದೆ. ಆದರೆ ಈಗ ನಾವೂ ರಾಮ ಭಕ್ತರಲ್ಲ ಅಂತಿದ್ದಾರೆ. ರಾಮ ಮಂದಿರಕ್ಕೆ ನನ್ನದು ಎರಡು ಕೋಟಿ ಕಾಂಟ್ರಿಬ್ಯೂಷನ್ ಇದೆ. ದೊಡ್ಡ ದೊಡ್ಡವರನ್ನು ಕರೆಸಿ ಆ ಬಗ್ಗೆ ದೇಣಿಗೆ ಕೊಡಿಸಿದ್ದೀನಿ ಎಂದಿದ್ದಾರೆ.
ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಕುರಿತು ಮಾತನಾಡಿದ್ದು, ಹುಬ್ಬಳ್ಳಿಯಲ್ಲಿ ಅಡ್ವಾಣಿ ಅವರು ಬಂದಾಗ ರಥಯಾತ್ರೆ ನಡೆದಿತ್ತು. ಅವತ್ತಿನ ಕಾರ್ಯಕ್ರಮ ನಾನೇ ನಡೆಸಿದ್ದೆ. ಇದಕ್ಕೆ ಅಡ್ವಾಣಿಯವರ ಕಾಂಟ್ರುಬ್ಯೂಷನ್ ಜಾಸ್ತಿ ಇದೆ. ಅಯೋಧ್ಯೆ ವಿಚಾರವಾಗಿ, ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಅವರದ್ದು ದೊಡ್ಡ ಕಾಂಟ್ರಿಬ್ಯೂಷನ್ ಇದೆ. ಅವರಿಗೆ ಆಹ್ವಾನವನ್ನೇ ನೀಡಿರಲಿಲ್ಲ. ಮೀಡಿಯಾದಲ್ಲಿ ಸುದ್ದಿ ಬಂದಾಗ ಹೋಗಿ ಆಹ್ವಾನ ನೀಡಿದರು. ಇದು ನನಗಿರುವ ಮಾಹಿತಿ ಏನಂದ್ರೆ, ಆಹ್ವಾನ ಕೊಟ್ಟರು. ಆಮೇಲೆ ನಿಮಗೆ ವಯಸ್ಸಾಗಿದೆ. ನೀವೂ ಮನೆಯಲ್ಲಿದ್ದರು ವೀಕ್ಷಣೆ ಮಾಡಬಹುದು ಎಂಬ ಸಲಹೆಯನ್ನು ಕೊಡುತ್ತಾರೆ ಎಂದರೆ ಕೊಟ್ಟಂಗೂ ಆಗಿರಬೇಕು, ನೀವೂ ಬರಬಾರದು ಅಂತಾನು ಹೇಳಬೇಕು. ಇದರಲ್ಲಿ ಏನು ಅರ್ಥ ಆಗುತ್ತೆ. ಅಂಥ ಅಡ್ವಾಣಿ ಅವರಿಗೆ ಆಹ್ವಾನ ಕೊಟ್ಟು ಬರಬೇಡಿ ಎಂದರೆ ಇನ್ನುಳಿದವರ ಗತಿ ಏನಾಗಬಹುದು ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್