ಒಮೈಕ್ರಾನ್ ಬಗ್ಗೆ ಭಯ ಬೇಡ : ಸಚಿವ ಸುಧಾಕರ್

suddionenews
1 Min Read

ಬೆಳಗಾವಿ: ಇತ್ತೀಚೆಗೆ ಒಮಿಕ್ರಾನ್ ಆತಂಕ ಶುರುವಾಗಿದೆ. ರೂಪಾಂತರಿ ಕೊರಿನಾ ಎಲ್ಲೆಡೆ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ಎಲ್ಲರಲ್ಲೂ ಅಸತಂಕ ಹೆಚ್ಚಾಗಿದೆ. ಈ ಬಗ್ಗೆ ಆತಂಕ ಬೇಡ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಒಮಿಕ್ರಾನ್ ಗೆ ಆತಂಕ ಬೇಡ. ಈಗಾಗಲೇ ಎಂಟು ಜನರಗೆ ಒಮಿಕ್ರಾನ್ ದೃಢವಾಗಿದೆ. ಅವರ ಸಂಪರ್ಕಿತರನ್ನ ಸಂಪರ್ಕಿಸಿ, ಸರ್ಕಾರ ಕ್ರಮ ತೆಗೆದುಕೊಂಡಿದೆ. ಕಡ್ಡಾಯವಾಗಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇಂದು ಬೆಳಗ್ಗೆ ಲಂಡನ್ ದುಬೈನಿಂದ ಬಂದಿದ್ದ ಪ್ರಯಾಣಿಕರಲ್ಲಿ ಕೊರೊನಾ ದೃಢವಾಗಿದೆ. ಏರ್ಪೋರ್ಟ್ ನಲ್ಲಿ ಚೆಕ್ ಮಾಡಿದಾಗ ಐವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸದ್ಯ ಜಿನೋಮ್ ಸೀಕ್ವೆನ್ಸಿಂಗ್ ಗೆ ಟೆಸ್ಟ್ ಕಳುಹುಸಿಲಾಗಿದೆ. ಅಲ್ಲಿಂದ ಬರುವ ರಿಪೋರ್ಟ್ ಗಾಗಿ ಕಾಯುತ್ತಿದ್ದಾರೆ. ಐವರು ಹೋಂ ಐಸೋಲೇಷನ್ ನಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *