Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಂಗಳೂರಿಗೆ ಬಂದ ದೊಡ್ಮನೆ ಸೊಸೆ : ನಾಳೆ ಯುವ – ಶ್ರೀದೇವಿ ಡಿವೋರ್ಸ್ ಕೇಸ್ ವಿಚಾರಣೆ..!

Facebook
Twitter
Telegram
WhatsApp

ಬೆಂಗಳೂರು: ದೊಡ್ಮನೆ ಮೊಮ್ಮಗ ಯುವ ರಾಜ್‍ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೋರು ಚರ್ಚೆಯೂ ಆಗಿತ್ತು. ವಿದೇಶದಲ್ಲಿದ್ದ ಶ್ರೀದೇವಿ ಭೈರಪ್ಪ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾಳೆ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಶ್ರೀದೇವಿ ಭೈರಪ್ಪ ಕೂಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ನಾಳಿನ ವಿಚಾರಣೆ ವಿಚ್ಛೇದನ ಕೇಸ್ ಗೆ ನಿರ್ಣಾಯಕ ದಿನವಾಗಿದೆ. ಯುವ ರಾಜ್‍ಕುಮಾರ್ ವಿಚ್ಚೇದನ ಕೋರಿ ಜೂನ್ 6 ರಂದು ಅರ್ಜಿ ಸಲ್ಲಿಕೆ ಮಾಡಿದ್ದರು. ಅಂದು ವಿಚಾರಣೆ ನಡೆಸಿದ್ದ ಫ್ಯಾಮಿಲಿ ಕೋರ್ಟ್ ಜುಲೈ 4ಕ್ಕೆ ಮುಂದೂಡಿಕೆ ಮಾಡಿತ್ತು. ಹೀಗಾಗಿ ನಾಳೆ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಶ್ರೀದೇವಿ ಕೂಡ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದು, ವಿಚಾರಣೆಗೆ ಹಾಜರಾಗುತ್ತಾರೆ ಎಂದೇ ಹೇಳಲಾಗುತ್ತಿದೆ.

ಯುವ ರಾಜ್‍ಕುಮಾರ್ ದಾಂಪತ್ಯ ಜೀವನದ ಬಿರುಕು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶ್ರೀದೇವಿ ಹಾಗೂ ಯುವ ಇಬ್ಬರು ಪ್ರೀತಿಸಿ ಮದುವೆಯಾಗಿದ್ದವರು. ಆದರೆ ಯುವ ಮೊದಲ ಸಿನಿಮಾದ ಸಮಯದಲ್ಲಿಯೂ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ವಿದೇಶದಲ್ಲಿ ಓದುವುದಕ್ಕೆ ಹೋಗಿದ್ದಾರೆ ಎಂದೇ ಎಲ್ಲರೂ ಭಾವಿಸಿ ಸುಮ್ಮನೆ ಆಗಿದ್ದರು. ಆದರೆ ಡಿವೋರ್ಸ್ ಕೇಸ್ ಹೊರಗೆ ಬಂದೊಡನೆ ದೊಡ್ಡ ಶಾಕ್ ಆಗಿತ್ತು. ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಒಬ್ಬರಿಗೊಬ್ಬರು ಆರೋಪ ಮಾಡುವುದರಲ್ಲಿ ಮುಳುಗಿದರು. ಯುವ ರಾಜ್‍ಕುಮಾರ್ ಕಡರಯ ವಕೀಲರು ಶ್ರೀದೇವಿ ಅವರ ನಡವಳಿಕೆ ಬಗ್ಗೆ ಮಾತನಾಡಿದರೆ , ಶ್ರೀದೇವಿ ಬಹಿರಂಗವಾಗಿಯೇ ಪೋಸ್ಟ್ ಒಂದನ್ನು ಹಾಕಿದ್ದರು. ಸಹ ನಟಿಯ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರಿಂದ ನಾನು ದೂರಾದೆ ಎಂದಿದ್ದರು. ಇದರ ನಡುವೆ ಸಪ್ತಮಿ ಗೌಡ ಆಡಿಯೋ ಬೇರೆ ವೈರಲ್ ಆಗಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜುಲೈ 21 ರಂದು ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 91 ನೇ ಸರ್ವ ಸದಸ್ಯರ ಸಭೆ

ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ನಗರದ ಪ್ರತಿಷ್ಠಿತ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2023-24ನೇ ಸಾಲಿನ 91 ನೇ ಸರ್ವಸದಸ್ಯರ ಸಭೆಯನ್ನು ಜುಲೈ 21 ರ ಭಾನುವಾರ ಬೆಳಗ್ಗೆ 10:00

Garlic Benefits : ಬೆಳ್ಳುಳ್ಳಿಯನ್ನು ಹೀಗೆ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು…!

ಸುದ್ದಿಒನ್ : ಬೆಳ್ಳುಳ್ಳಿ ಮಾನವನ ಆರೋಗ್ಯಕ್ಕೆ ಜೀವರಕ್ಷಕವಾಗಿದೆ. ಬೆಳ್ಳುಳ್ಳಿ ವಿವಿಧ ರೋಗಗಳನ್ನು ನಿವಾರಿಸುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಇದು ಆಂಟಿಆಕ್ಸಿಡೆಂಟ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಅನೇಕ ರೋಗಗಳ ವಿರುದ್ಧ ಹೋರಾಡಲು

ಈ ರಾಶಿಯವರಿಗೆ ಅಷ್ಠಮ ಸ್ಥಾನದ ಶನಿಯಿಂದ ದಂಪತಿಗಳಿಗೆ ಕುಟುಂಬ ಕಲಹ, ಹಣಕಾಸಿನ ತೊಂದರೆ

ಈ ರಾಶಿಯವರಿಗೆ ಅಷ್ಠಮ ಸ್ಥಾನದ ಶನಿಯಿಂದ ದಂಪತಿಗಳಿಗೆ ಕುಟುಂಬ ಕಲಹ, ಹಣಕಾಸಿನ ತೊಂದರೆ, ಉದ್ಯೋಗದಲ್ಲಿ ಕಿರಿ ಕಿರಿ, ಪ್ರೇಮಿಗಳಿಗೆ ವಿರಸ, ಶನಿವಾರ- ರಾಶಿ ಭವಿಷ್ಯ ಜುಲೈ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:50 ಶಾಲಿವಾಹನ

error: Content is protected !!