ಹಿಂದೂ ಎಂಬ ಒಂದೇ ಕಾರಣಕ್ಕೆ ಅವನನ್ನು ಹತ್ಯೆ ಮಾಡಬೇಕೆನ್ನುವುದು ಸರಿಯಲ್ಲ: ಸಚಿವ ಶಂಕರ್ ಪಾಟೀಲ್

suddionenews
1 Min Read

ಬೆಳಗಾವಿ: ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶಂಕರ್ ಪಾಟೀಲ್ ಬುದ್ಧಿ ಮಾತು ಹೇಳಿದ್ದಾರೆ. ಹಿಂದೂ ಎಂಬ ಒಂದೇ ಕಾರಣಕ್ಕೆ ಅವನನ್ನು ಹತ್ಯೆ ಮಾಡಬೇಕೆನ್ನುವುದು ಸರಿಯಲ್ಲ ಎಂದು ಬುದ್ದಿ ಮಾತು ಹೇಳಿದ್ದಾರೆ.

ಹಿಂದೂ ಮುಸ್ಲಿಂ ಯಾರೇ ಆಗಲಿ. ದೇಶದಲ್ಲಿ ಅಣ್ಣ ತಮ್ಮಂದಿರಂತೆ ಇರಬೇಕು. ಅದನ್ನು ಬಿಟ್ಟು ನಾನೂ ಹಿಂದು ಅಂತ ಕೊಲೆ ಮಾಡಬೇಕೆಂದುಕೊಳ್ಳುವುದು ಯಾವ ನ್ಯಾಯ..? ಯಾವುದೇ ಸಮಾಜದಲ್ಲಿ ಈ ರೀತಿ ಇದ್ದರು ತಿದ್ದುಕೊಳ್ಳಬೇಕು. ಧರ್ಮಗುರುಗಳಿಂದ ಸಮಾಜದ ಪರಿವರ್ತನೆಯ ಕೆಲಸಗಳಾಗಬೇಕು. ಸಾಮರಸ್ಯದಿಂದ ಬದುಕುವಂತ ಸಮಾಜ ಕಟ್ಟಬೇಕು.

ಸರ್ಕಾರ ಕೂಡ ಗಮನಿಸಬೇಕು. ಕಾನೂನು ಏನಿದೆ..? ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ಅಣ್ಣ ತಮ್ಮಂದಿರಂತೆಯೇ ಬದುಕಬೇಕು. ಆದರೆ ಹೀಗೆ ಹಿಂದೂ ಎಂಬ ಕಾರಣಕ್ಕೆ ಹತ್ಯೆಗೆ ಸ್ಕೆಚ್ ಹಾಕುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *