Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರಾಕಿಂಗ್ ಸ್ಟಾರ್ ಯಶ್ ಜೊತೆ ಪ್ರಧಾನಿ ಮೋದಿ ಮಾತಾಡಿದ್ದೇನು ಗೊತ್ತಾ..?

---Advertisement---

ಬೆಂಗಳೂರು: ಏರ್ ಇಂಡಿಯಾ ಶೋ ಕಾರ್ಯಕ್ರಮದಲ್ಲಿ ಇಂದು ಪ್ರಧಾನಿ ಮೋದಿ ಭಾಗವಹಿಸಿದ್ದರು. ಉದ್ಘಾಟನೆ ಮಾಡಿ, ಏರ್ ಶೋ ವೀಕ್ಷಿಸಿ, ತ್ರಿಪುರಾಕ್ಕೆ ವಾಪಾಸ್ ತೆರಳಿದ್ದಾರೆ. ಆದರೆ ಅದಕ್ಕೂ ಮುನ್ನ ಅಂದ್ರೆ ನಿನ್ನೆ ರಾತ್ರಿ ಸ್ಯಾಂಡಲ್ ವುಡ್ ದಿಗ್ಗಜರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ನಟ ಯಶ್, ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಆರ್ ಜೆ ಶ್ರದ್ಧಾ ಔತಣಕೂಟದಲ್ಲಿ ಭಾಗಿಯಾಗಿದ್ದರು.

ಈ ವಿಶೇಷ ಔತಣಕೂಟದ ಫೋಟೋಗಳು ಎಲ್ಲೆಡೆ ವೈರಲ್ ಆಗಿತ್ತು. ಪ್ರಧಾನಿ ಮೋದಿಯವರ ಜೊತೆಗೆ ಇವರೆಲ್ಲ ಏನೆಲ್ಲಾ‌ ಮಾತನಾಡಿರಬಹುದು ಎಂಬ ಕುತೂಹಲವೂ ಎಲ್ಲರನ್ನು ಕಾಡಿತ್ತು. ಅದಕ್ಕೆ ಉತ್ತರ ಇದೀಗ ಸಿಕ್ಕಿದೆ. ಪ್ರಧಾನಿ ಮೋದಿ ಅವರ ಭೇಟಿ ಬಳಿಕ ನಟ ಯಶ್ ಮಾತನಾಡಿದ್ದು, ಅವರನ್ನು ಭೇಟಿಯಾಗಿ ತುಂಬಾನೇ ಖುಷಿಯಾಯ್ತು. ಅವರು ನಮ್ಮ ಬೇಡಿಕೆಗಳನ್ನು ಕೇಳಿದರು ಎಂದಿದ್ದಾರೆ.

ಸರ್ಕಾರದಿಂದ ಏನನ್ನು ಕೇಳಲು ಬಯಸುತ್ತೀರಿ..? ನಾವೂ ಚಿತ್ರೋದ್ಯಮಕ್ಕೆ ಏನೆಲ್ಲಾ ಮಾಡಬಹುದು..? ಎಂದು ಕೇಳಿದರು. ನಾವು ಇದನ್ನೆಲ್ಲಾ ಅವರ ಜೊತೆಗೆ ಚರ್ಚೆ ಮಾಡಲು ಸದಾವಕಾಶ ಸಿಕ್ಕಿತು. ಪ್ರಧಾನಿ ಮೋದಿಯವರ ಅದ್ಭುತ ಜ್ಞಾನಕ್ಕೆ ಸೋತು ಹೋದೆನು. ಅವರು ನಮ್ಮ ಕನ್ನಡ ಇಂಡಸ್ಟ್ರಿ ಬಗ್ಗೆ ಒಳ್ಳೆಯ ಆಸಕ್ತಿ ಇಟ್ಟುಕೊಂಡಿದ್ದಾರೆ. ನಮ್ಮೆಲ್ಲರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...