ಧನಿಯಾ ಬೀಜವನ್ನ ಬಳಸುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳಿದಾವೆ ಗೊತ್ತಾ..?

1 Min Read

 

ನಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ನಮ್ಮ ಆರೋಗ್ಯವನ್ನ ಕಾಪಾಡುತ್ತವೆ. ಆ ಬಗ್ಗೆ ನಮ್ಮ ಹಿರಿಯರು ಈಗಾಗಲೇ ಸಾಕಷ್ಟು ಸಲ ಹೇಳಿದ್ದಾರೆ. ಅದರಲ್ಲೂ ಈ ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರು, ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎನ್ನುವವರು ಅಡುಗೆ ಮನೆಯಲ್ಲಿರುವ ಅಡುಗೆಗೆ ಪ್ರತಿನಿತ್ಯ ಬಳಸುವ ಪದಾರ್ಥಗಳಿಂದಾನೇ ಆರೋಗ್ಯ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬಹುದು. ಅದರಲ್ಲೂ ಧನ್ಯ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಆ ಧನ್ಯದಿಂದ ಏನೆಲ್ಲಾ ಆರೋಗ್ಯಕರ ಲಾಭಗಳು ಇದಾವೆ ಎಂಬುದರ ಮಾಹಿತಿ ಇಲ್ಲಿದೆ‌ ನೋಡಿ.

 

1. ಜೀರ್ಣಕ್ರಿಯೆ ಸುಧಾರಿಸಲು ಈ ಧನ್ಯವನ್ನು ಮದ್ದಾಗಿ ಬಳಸಬಹುದಾಗಿದೆ. ಇದನ್ನ ಬಳಕೆ ಮಾಡುವುದು ಹೇಗೆ ಗೊತ್ತಾ..? 1 ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಆ ನೀರನ್ನ ಕುಡಿಯುತ್ತಾ ಬಂದರೆ ನಿಮಗೆ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಇದರಿಂದ ಹೊಟ್ಟೆ ಉರಿಯೂತ, ಆಮ್ಲತೆ (ಅಸಿಡಿಟಿ), ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.

ಅಷ್ಟೇ ಅಲ್ಲ ರಕ್ತದೊತ್ತಡ ಬಿ.ಪಿ.ನಿಯಂತ್ರಣಕ್ಕೆ ಬರುತ್ತದೆ. 1 ಚಮಚ ಕೊತ್ತಂಬರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಖಾಲಿ ಹೊಟ್ಟೆಗೆ ಆ ತಂಪಾಗಿರುವ ನೀರನ್ನು ಸೋಸಿ ಕುಡಿಯಿರಿ. ಇದರಿಂದ ರಕ್ತ ಒತ್ತಡ ನಿಯಂತ್ರಣಕ್ಕೆ ಬರಲಿದೆ. ರಕ್ತದೊತ್ತಡ ತಗ್ಗಿಸಲು, ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿದಿನ ಈ ನೀರನ್ನ ಸೇವಿಸಿ.

ಇನ್ನು ಥೈರಾಯ್ಡ್ ಸಮಸ್ಯೆ ಇರುವವರು ಹೆಚ್ಚಾಗಿದ್ದಾರೆ. ಅಂಥವರು ರಾತ್ರಿ ನೀರಿನಲ್ಲಿ ಮೇಲಿನ ಪ್ರಮಾಣದಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಂಪಾದ ಕೊತ್ತಂಬರಿ ನೀರನ್ನು ಸೋಸಿ ಕುಡಿಯಿರಿ ದೇಹಕ್ಕೆ ತಂಪು, ಥೈರಾಯ್ಡ್ ನಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *