ದೆಹಲಿಯ ಯಾತ್ರೆಯ ಬಳಿಕ ಅಜ್ಜಯ್ಯನ ಮೊರೆ ಹೋದ ಡಿಕೆಶಿ

1 Min Read

 

ತುಮಕೂರು: ದೆಹಲಿಗೆ ಹೋಗಿ, ಹೈಕಮಾಂಡ್ ಭೇಟಿಯಾದ ಬಳಿಕವೂ ಡಿಕೆ ಶಿವಕುಮಾರ್ ಅವರಿಗೆ ತಮ್ಮ‌ಮನಸ್ಸಿನ ತಳಮಳ ಇನ್ನು ಕಡಕಮೆಯಾದಂತೆ ಇಲ್ಲ. ಸಮಾಧಾನಕರ ಉತ್ತರ ಅಲ್ಲಿಂದ ಸಿಕ್ಕಿರಬಹುದು. ಆದರೆ ಇಬ್ಬರನ್ನು ಕರೆಸಿ, ಮಾತನಾಡಿ, ಒಂ್ಉ ನಿರ್ಧಾರವನ್ನು ಹೈಕಮಾಂಡ್ ಹೇಳಿದರೆ ಖಂಡಿತ ಡಿಕೆ ಶಿವಕುಮಾರ್ ಸಮಾಧಾನಗೊಳ್ಳುತ್ತಾರೆ. ಇನ್ನು ಉಳಿದಿರುವುದು ಎರಡು ವರ್ಷಗಳ ಸೆಣೆಸಾಟ. ಅಷ್ಟರೊಳಗೆ ಸಿಎಂ ಆಗುವ ಆಸೆ ಫಲ ಕೊಡುತ್ತಾ ಎಂಬ ಆತಂಕ ಸಹಜವಾಗಿಯೇ ಇರುತ್ತದೆ.

ಈ ಎಲ್ಲಾ ಆಲೋಚನೆಗಳ ನಡುವೆ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಮೊರೆ ಹೋಗ್ತಾರೆ ಎಂಬ ಮಾಹಿತಿ ಇದೆ. ತುಮಕೂರು ಜಿಲ್ಲೆ, ತಿಪಟೂರಿನ ನೊಣವಿನಕೆರೆಯಲ್ಲಿರುವ ಅಜ್ಜಯ್ಯ ಅಂದ್ರೆ ಡಿಕೆ ಶಿವಕುಮಾರ್ ಅವರಿಗೆ ಅತಿಯಾದ ನಂಬಿಕೆ. ಅಜ್ಜಯ್ಯನ ಅಪಗಪಣೆ ಪಡೆದು ಮುಂದಿನ ನಿರ್ಧಾರ ಕೈಗೊಳ್ತಾರೆ ಎನ್ನಲಾಗಿದೆ. ಹೀಗಾಗಿಯೇ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಜಾತ್ರಾ ಮಹೋತ್ಸವ ಕೂಡ ಇರುವ ಕಾರಣ, ಭಾಗಿಯಾಗಿ ಅಜ್ಜಯ್ಯನ ದರ್ಶನ ಪಡೆಯಲಿದ್ದಾರೆ.

ಡಿಕೆ ಶಿವಕುಮಾರ್ ಅವರು ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಪದ್ಧತಿ ಅಂದ್ರೆ ಅಜ್ಜಯ್ಯನ ದರ್ಶನ ಮಾಡುವುದು. ಸಂಕಷ್ಟದಲ್ಲಾಗಲಿ, ಸಂತಸದ ಸಂದರ್ಭದಲ್ಲಾಗಲಿ ಅಜ್ಜಯ್ಯನ ಗುಡಿಗೆ ಹೋಗಿ ದರ್ಶನ ಪಡೆದು ಬರ್ತಾರೆ. ಬಹಳಷ್ಟು ತಾಳ್ಮೆಯಿಂದ ಸಿಎಂ ಹುದ್ದೆಗಾಗಿ ಕಾಯ್ತಿದ್ದಾರೆ. ಹೀಗಾಗಿ ಈ ಬಾರಿಯಾದರೂ ಅಜ್ಜಯ್ಯನ ಆಶೀರ್ವಾದ ಇರಲಿ, ಸಿಎಂ ಆಗುವ ಕನಸು ನನಸಾಗಲಿ ಎಂದು ಬೇಡಿಕೊಳ್ಳಲಿದ್ದಾರೆ. ಈ ವಿಚಾರಕ್ಕೆ ದೇವರುಗಳಿಗೆ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಇನ್ನು ದೇವರು ಫಲ ಕೊಡಲಿ ಅಂತಷ್ಟೇ ಕಾಯ್ತಿದ್ದಾರೆ. ಹೈಕಮಾಂಡ್ ನಾಯಕರು ಕೂಡ ಭರವಸೆಯನ್ನ ಕೊಟ್ಟು ಕಳುಹಿಸಿದ್ದಾರೆ.

Share This Article
Enable Notifications OK No thanks